ಪರಶುರಾಮ್ ಎಸ್. ನಾಗೂರು ಅವರು ಬರೆದ ಕವಿತೆ ‘ಮುದಿ ನದಿ’

ನದಿ ನಡುವಲ್ಲೊಂದು
ಕಲ್ಲುಗುಂಡು
ಕುಳಿತಾವದರ ಮೇಲೆ
ಬೆಳ್ಳಕ್ಕಿ ಹಿಂಡು

ಬೇಸಿಗೆಯ ಮುದಿ ನದಿಗೆ
ಮುತ್ತಿದೆ ಬೆಸ್ತರ ದಂಡು
ನಿಶಕ್ತಿಯಲ್ಲಿ ಉಸಿರಿದೆ ಕೃಷ್ಣೆ
ಹೋಗಿರಿ ಉಂಡು

ಬೆದರಿದವು ಚದುರಿದವು
ಜಲಚರ,ವಾಗರಿಕರ ಕಂಡು
ಮೌನ ಮುರಿದ ಧ್ವನಿಗೆ
ಹಾರಿದವು ಹಕ್ಕಿಗಳ ಹಿಂಡು

ಬೀಸಿ ಬೀಸಿ ಎಸೆದರು
ಗಾಳ ನಡುವಳೆಗೆ
ಠಕ್ಕನಂತೆ ಕುಳಿತ
ವಾಗರಿಕ ಮರೆಗೆ

ರಿಣ ಮುಗಿದ ಜಲಚರ
ಹೆಣ ವಾದವು
ವಾಗರಿಕನ ಎದೆಯಲ್ಲಿ
ಗೆಲುವಿನ ನಗೆ ಯಾದವು

ಚಂದಾದಾರರಾಗಿ
ವಿಭಾಗ
4 ಪ್ರತಿಕ್ರಿಯೆಗಳು
Inline Feedbacks
View all comments
Shantalingappa Patil
29 June 2023 08:31

ಸರಳ ಸುಂದರ
ಪ್ರತಿ ಸಾಲೂ ಮಧುರ ಭೇಷ್

Chidanand
16 June 2023 10:22

Nice

ಮಿಂಚುಳ್ಳಿ ಸಾಹಿತ್ಯ ಪತ್ರಿಕೆ
16 June 2023 09:49

ಆಸಕ್ತರು ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ವಾಟ್ಸಾಪ್ ಗುಂಪನ್ನು ಸೇರಬಹುದು.
https://chat.whatsapp.com/KL90U4wqSPAF01iRxqfcgm

ಬಸವರಾಜ ಕಿರಣಗಿ
16 June 2023 09:15

ಅತೀ ಸುಂದರ ಕವನ

0
    0
    Your Cart
    Your cart is emptyReturn to Shop