ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಖಗದ ತುಡಿತ’

ಸಾಲು ಮರವು ಸಾಲದಾಗಿದೆ
ನಾಕು ದಿಕ್ಕಿಗೂ
ಒಣಮರವೇ ಭಾಗವಾಗಿದೆ
ಹೆಜ್ಜೆ ಹೆಜ್ಜೆಗೂ

ಚಿಗುರ ಒಗರ ಸವಿದುಕೊಂಡು
ಲಾಲಿ ಹಾಡಿದೆ
ದೂರಮರದ ಸವಿಯನುಂಡು
ಬದುಕ ಎಣಿಸಿದೆ

ಟಿಸಿಲು ಒಡೆದು ಗೂಡಿಗೆಂದು
ಕೊಟ್ಟೆ ರಕ್ಷಣೆ
ಚಿಲಿಪಿಲಿಯ ಹಾಡಿಗೆಂದು
ಹಾಕಿದೆ ಮಣೆ

ಹಾರಲಾರೆ ದೂರವೆನಿತು
ಗರಿಯು ಹರಿದಿದೆ
ಹಾಡಲಾರೆ ರಾಗವೆನಿತು
ಕೊರಳು ಸೊರಗಿದೆ

ಮೂಡಬಲ್ಲದೇನು ಚಿಗುರು
ಮೋಡ ಜಿನುಗಿದೆ
ಟೊಂಗೆಯಲ್ಲು ಹಸಿರ ಕೆದರು
ಜೀವ ಕಾದಿದೆ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop