ಕುಪ್ಪಳಿಯಲ್ಲೊಂದು ಕಲರವದ ಮಿಂಚುಳ್ಳಿ ಕಮ್ಮಟ – ಪಿ. ವೆಂಕಟೇಶ್ ಬಾಗಲವಾಡ

ಎಂದಿನಂತೆ ಹಾಗೆ ಮೊಬೈಲ್ನಲ್ಲಿ ಕಣ್ಣಾಡಿಸುವಾಗ ಯಾವುದೋ ಗುಂಪಿನಲ್ಲಿ ಮಿಂಚುಳ್ಳಿಯವರ ಕಮ್ಮಟದ ಬಗ್ಗೆ ಓದಿದೆ. ಅದೇ ತಾನೆ ವಾರದ ಹಿಂದೆ ರಾಯಚೂರು ಹತ್ತಿರ ಮಲಯಾಬಾದ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಜರುಗಿದ ಕಾವ್ಯ ಕಮ್ಮಟದಲ್ಲಿ ಭಾಗವಹಿಸಿ ಬಂದಿದ್ದೆ. ಇದಕ್ಕೆ ಹೋಗುವುದೋ, ಬೇಡವೋ ಎಂದು ಮನಸ್ಸು ಹೊಯ್ದಾಡುತಿತ್ತು. ಕೊನೆಗೆ ನಾನು ಹೋಗದಿದ್ದರೇನಾಯಿತು ನನ್ನ ಸಾಹಿತ್ಯ ಗೆಳೆಯರಾದರೂ ಹೋಗಲಿ ಎಂದು ಸುಮಾರು ಹದಿನೈದು ಜನಕ್ಕೆ ತಿಳಿಸಿದೆ. ಕೆಲವರು ಹೋಗೋಣ ಎಂದರು, ಇನ್ನು ಕೆಲವರು ದೂರದ ದಾರಿ ಎಂದು ನೋಡೋಣ ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟರು, ಇನ್ನೂ ಕೆಲವರು ನೀವು ಬರುವುದಾದರೆ ನಾವು ಬರುತ್ತೇವೆ ಎಂದು ಷರತ್ತು ಹಾಕಿದರು. ಅಷ್ಟರಲ್ಲಿ ಗೆಳೆಯ ಶಿವರಾಜ್ ದಿನ್ನಿ ಕೆಲವರಿಗೆ ಮಾಹಿತಿ ನೀಡಿ ಬರಲು ಓಪ್ಪಿಸಿದ್ದಾಗಿ ವರದಿ ಒಪ್ಪಿಸಿದ ನಂತರ ಸರಿ ಎಂದು ಒಪ್ಪಿಕೊಂಡು ಬಸ್ ಮುಂಗಡ ಟಿಕೇಟ್-ಗಾಗಿ ತಿಳಿಸಿದೆ. ನಂತರ ಮಿಂಚುಳ್ಳಿಯವರಿಗೆ ಸಂಪಕಿ೯ಸಿ ನನ್ನ ಹೆಸರನ್ನು ನೊಂದಾಯಿಸಿದೆ. ನಂತರ ಶುರುವಾಯಿತು ತಾಕಲಾಟ, ಟಾಗೆ೯ಟ್ ಪೂರೈಸುವ ಗೂಗಲ್ ಮೀಟ್ ಹೀಗೆ ಕಚೇರಿಯ ಕಾಯ೯ದ ಒತ್ತಡ. ಇನ್ನೊಂದು ಕಡೆ ಕಳೆದ ತಿಂಗಳಿನಿಂದ ಶುರುವಾದ ಸಯಾಟಿಕ್ ಕಾಲು ನೋವು ವೈದ್ಯಕೀಯ ಚಿಕಿತ್ಸೆ ಪಡೆದರೂ ಇನ್ನೂ ನಾನು ಇದ್ದೇನೆ ನಿನ್ನ ಜೊತೆಗೆ ಬರುತ್ತೇನೆ ಎಂದು ಆಗಾಗ್ಗೆ ನೋವುಂಟಾಗಿ ನನ್ನನ್ನು ಎಚ್ಚರಿಸುತಿತ್ತು. ಅಷ್ಟೇ ಅಲ್ಲದೆ ಈ ವಿಷಯ ನನ್ನ ಕಚೇರಿ ಸಿಬ್ಬಂದಿಗಾಗಲಿ, ನನ್ನ ಮಕ್ಕಳಿಗಾಗಲೀ ಗೊತ್ತಾಗಬಾರದು ಎಂದು ಸ್ವಲ್ಪ ಗೌಪ್ಯತೆ ಕಾಯ್ದುಕೊಳ್ಳಬೇಕಾಯಿತು. ಕಚೇರಿ ಸಿಬ್ಬಂದಿಗೆ ಗೊತ್ತಾದರೆ ರಜೆ ಸಮಸ್ಯೆ, ಮಕ್ಕಳಿಗೆ ಗೊತ್ತಾದರೆ ಕಾಲು ಇಟ್ಟುಕೊಂಡು ಕಮ್ಮಟ, ಗೋಷ್ಠಿ ಎಂದು ಹೋದರೆ ಹೇಗೆ ಕಡಿವಾಣ ಹಾಕುವುದು ಗ್ಯಾರಂಟಿ ಇತ್ತು. ಈ ಇಬ್ಬರಿಗೂ ಒಂದು ಬೃಹತ್ ಸುಳ್ಳು ಸೃಷ್ಟಿಸಿ ಹೋಗಲು ನಿಧ೯ರಿಸಿದೆ. ಕಮ್ಮಟಕ್ಕೆ ಬರುವಾಗ ಎನೆಲ್ಲ ಸಾಮಾನುಗಳನ್ನು ತರಬೇಕೆಂದು ಸೂಯ೯ಕೀತಿ೯ ಸೂಚಿಸಿ ಫಮಾ೯ನು ಹಾಕಿದ್ದರು. ಅದರಂತೆ ಎಲ್ಲವನ್ನೂ ಮದುವೆ ಮನೆಯ ಯಜಮಾನನಂತೆ ನೆನಪಿಸಿಕೊಂಡು ಬ್ಯಾಗಿನಲ್ಲಿ ಜೊಡಿಸುವ ಕೆಲಸ ಪ್ರಾರಂಭಿಸಿದೆ. ಕುಪ್ಪಳಿಗೆ ಕನಿಷ್ಟ ಹತ್ತು ವಷ೯ದ ಹಿಂದೆ ಶಾಲಾ ಮಕ್ಕಳ ಜೊತೆಗೆ ಹೋಗಿದ್ದರೂ ಅಲ್ಲಿ ಇಷ್ಟೊಂದು ತಾಣಗಳನ್ನು ನೋಡಲಾಗಿರಲಿಲ್ಲ.

ನಂತರ ಗೆಳೆಯ ಶಿವರಾಜ್ ಬಸ್ ಮುಂಗಡ ಟಿಕೇಟ್ ಮಾಡಿಸಿದ್ದಾಗಿ ತಿಳಿಸಿ ಚುಣಾವಣೆ ಅಭ್ಯರ್ಥಿಯಂತೆ ಮತದಾನ ಮುಗಿಯುವರೆಗೆ ದುಂಬಾಲು ಬಿದ್ದಂತೆ ನನಗೆ ಪದೇಪದೆ ನೆನಪಿಸುತ್ತಿದ್ದ. ಆತನಿಗೋ ಬಹಳ ಉತ್ಸಾಹ, ತವಕ ನನಗೋ ಹೋದರಾಯಿತು, ಬಿಟ್ಟರಾಯಿತು ಎಂಬ ತಾತ್ಸಾರ….! ಶುಕ್ರವಾರ ಮಧ್ಯಾಹ್ನ ಎಲ್ಲ ಕೆಲಸ ಮುಗಿಸಿ ಸಿಂಧನೂರಿಗೆ ಹೋದೆ. ನನ್ನ ತೂಕದಷ್ಟೇ ದೊಡ್ಡ ಬ್ಯಾಗ ಮತ್ತೆ ಕೈಯೊಲ್ಲೋಂದು ಪುಟ್ಟ ಚೀಲ, ಸ್ವಲ್ಪ ಹಣ ಇಟ್ಟುಕೊಂಡೆ ಯಾಕಂದ್ರೆ ನನಗೆ ಯಾವ ಫೋನ್ ಪೇ/ಗೂಗಲ್ ಪೇ ಗೊತ್ತಿಲ್ಲ, ಗೊತ್ತಿರೋದು ಚಹಾ ಪೇ ಮಾತ್ರ! ಬಸ್ ವೇಳೆ ಸಮೀಪಿಸಿದಂತೆ ನನ್ನ ಮೂವರು ಮಿತ್ರರಾದ ಶಂಕುಸುತ, ಶ್ರೀ ಶೈಲ ಹಾಗೂ ಶಿವರಾಜ್ ದಿನ್ನಿ ಇವರೆಲ್ಲ ನನ್ನ ಅಧ೯ದಷ್ಟು ವಯಸ್ಸಿಗಿಂತ ಚಿಕ್ಕವರು. ಅವರ ಹುಡುಗಾಟ ನಗು, ಹಾಸ್ಯ ಇವುಗಳ ನಡುವೆ ಸ್ವಲ್ಪ ರಾಜ ಗಾಂಭೀರ್ಯ ಕಾಪಾಡಬೇಕಾಯಿತು. ಏಳುವರೆಗೆ ಯಾವ ವರೀ ಇಲ್ಲದೇ ಬಸ್ ಹತ್ತಿದೆ. ಹಿರಿಯನೆಂದು ನನಗೆ ಕಿಟಕಿ ಹತ್ತಿರ ಬಿಟ್ಟರು ಪುಣ್ಯಕ್ಕೆ ಯಾರೂ ಗುಟ್ಕಾ/ಪಾನ್ ಮಸಾಲ ಸೇವಿಸುವ ಹವ್ಯಾಸ ಇಲ್ಲದಿರುವುದು ಸಮಾಧಾನದ ಸಂಗತಿ. ಏಕೆಂದರೆ ಇತ್ತೀಚೆಗೆ ಯುವ ಜನಾಂಗದವರು ಗುಟ್ಕಾ ಹಾಕುವದರಿಂದ ಅವರಿಗೆ ಅನಿವಾರ್ಯವಾಗಿ ಕಿಡಕಿ ಹತ್ತಿರ ಜಾಗ ಬಿಡಬೇಕು, ಇಲ್ಲದಿದ್ದರೆ ನಮಗೆ ಉಗಿಯುವ ಪ್ರಮೇಯ ಬರಬಹುದು. ಬೆಳಿಗ್ಗೆ ನಾಲ್ಕು ಗಂಟೆಗೆ ನಾಲ್ಕು ಜನರು ಶಿವಮೊಗ್ಗ ತಲುಪಿದೆವು. ಸ್ವಲ್ಪ ಹೊತ್ತು ಅಲ್ಲೇ ಝಂಡಾ ಊರಿ ಚಚಿ೯ಸಿ ಖಾಸಗಿ ಬಸ್ ನಿಲ್ದಾಣದ ಹತ್ತಿರ ಹೋದೆವು. ಅಲ್ಲಿ ಆಗಲೆ ಒಂದು ಬಸ್ ರೆಡಿಯಾಗಿ ತೀಥ೯ಹಳ್ಳಿ ಎಂದು ಕೂಗಿ ಆಮಂತ್ರಣ ನೀಡುತ್ತಿದ್ದ, ಆದರೆ ಸ್ವಲ್ಪ ಚಳಿ ಇದ್ದರಿಂದ ನಮಗೆ ಬಿಸಿ ತೀಥ೯ ಬೇಕಾಗಿತ್ತು (ಅಂದರೆ ಚಹಾ) ನಂತರ ಬಸ್ನಲ್ಲಿ ತೀಥ೯ಹಳ್ಳಿ ತಲುಪಿ ಅಲ್ಲಿ ಚಹಾ ಸೇವಿಸಿ ಬಸ್ಗಾಗಿ ಕೇಳಿದೆವು, ಇನ್ನೂ ಒಂದು ಗಂಟೆ ನಂತರ ಎಂದಾಗ ಆಟೋದಲ್ಲಿ ಹೋಗಲು ನಿಧ೯ರಿಸಿ ಚೌಕಾಶಿ ಮಾಡಿ ಆ ಮೂವರು ಮಿತ್ರರನ್ನು ಕುಪ್ಪಳಿಗೆ ಕಳಿಸಿ ನಾನು ಅಲ್ಲೇ ಉಳಿದೆ ಏಕೆಂದರೆ ಕಚೇರಿಯ ಕೆಲಸಕ್ಕೆ ನನ್ನ ಸಹಾಯಕನಿಗೆ OTP ಹೇಳಬೇಕಾಗಿತ್ತು. ಈಗಾಗಲೇ ಅಲ್ಲಿ ಏರ್ಟೆಲ್ ಸಂಪರ್ಕ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದರು. ಇದರಿಂದಾಗಿ ಅಲ್ಲೇ ಉಳಿದು ಫೋನ್ ನಲ್ಲಿ ಕಣ್ಣಾಡಿಸುತ್ತ ಇರುವಾಗ ಇನ್ನೊಬ್ಬ ಮಿತ್ರರಾದ ಬೀರಪ್ಪ ಶಂಬೋಜಿ ಮತ್ತು ಸಾಹಿತ್ಯ ಸಹೋದರಿಯರಾದ ಲಕ್ಷ್ಮೀ ಕಟ್ಟಿ, ರುದ್ರಮ್ಮ ವಜ್ರಬಂಡಿ ಬಂದರು. ಉಭಯ ಕುಶಲೋಪರಿ ನಂತರ ಚಹಾ ಸೇವಿಸಿ ಹೊರ ಬರುವಷ್ಟರಲ್ಲಿ ಕೊಪ್ಪ ಬಸ್ ಬಂದಿತು. ನನಗೆ ಸ್ವಲ್ಪ ಧೈರ್ಯ ಬಂದಿತು. ಕಟ್ಟಿ ಹಾಗೂ ಬಂಡಿ (ವಜ್ರ) ಇಬ್ಬರೂ ಇದ್ದ ಮೇಲೆ ಕುಪ್ಪಳಿಗೆ ತಲುಪುವುದು ಸುಲಭ ಎಂದು ತಮಾಷೆಯೊಂದಿಗೆ ಗಡಿಕಲ್ಲು ತಲುಪಿ ನಂತರ ನಮ್ಮ ಲಗೇಜ್ ಮಣಭಾರ ಹೊತ್ತು ಕುಪ್ಪಳಿ ಕಡೆಗೆ ರೂಟ ನಂ ಏಲೆವನ್ (ಕಾಲ್ನಡಿಗೆ) ಸಹಾಯದಿಂದ ಹೊರೆಟೆವು. ಹೆಚ್ಚು ನಡೆದಂತೆ ಕಾಲು ನೋವು ಹೆಚ್ಚಾದರೆ ಹೇಗೆ ಎಂದು ನನಗೆ ನನ್ನೊಳಗೆ ಭಯ ಶುರುವಾಗಿತ್ತು ಆದರೂ ನಿಧಾನವೆ ಪ್ರಧಾನ ಎಂದು ನಡೆದು ಕುವೆಂಪು ಜನ್ಮ ಶತಾಬ್ಧಿ ಕಟ್ಟಡದೊಳಗೆ ಕಾಲಿಡುತ್ತಲೆ ಶ್ರೀ ಶಂಕರ ಸಿಹಿಮೊಗ್ಗೆ ಬಹಳ ಪರಿಚಯದವರಂತೆ ನಮ್ಮನ್ನು ಮಾತನಾಡಿಸಿ ಸ್ವಾಗತಿಸಿದರು.

ಬೆಳಿಗ್ಗೆ ಸುಮಾರು ಹತ್ತು ಗಂಟೆ ನಂತರ ಕಮ್ಮಟ ಉದ್ಘಾಟನಾ ಮುಖಾಂತರ ಪ್ರಾರಂಭವಾಯಿತು. ವಿಶೇಷತೆ ಎಂದರೆ ಯಾವುದೇ ಹಾರ, ತುರಾಯಿ, ಶಾಲು, ಹೂ ಇಲ್ಲದೆ ಅತ್ಯಂತ ಸರಳವಾಗಿ ನಡೆದದ್ದು ಆಗಮಿಸಿದ ಅತಿಥಿಗಳು ಸಹ ಅಷ್ಟೇ ಸರಳತೆಯಿಂದ ಇರುವುದನ್ನು ನೋಡಿ ಬಹಳ ಖುಷಿಯಾಯಿತು. ಈ ತರಹ ಸರಳ ಕಾಯ೯ಕ್ರಮಗಳು ಇಂದಿನ ದಿನಗಳಲ್ಲಿ ಅಪರೂಪವೆ ಸರಿ. ಸಂಜೆಯವರೆಗೆ ಕಾವ್ಯದ ಬಗ್ಗೆ ಕಥಾ ಹಂದರ ಕಟ್ಟುವ ಬಗೆ ಹಾಗೂ ಕಮ್ಮಟ ನೀಡಿದ ಆಯ್ದ ಕಥೆಗಳ ಬಗ್ಗೆ ಉಪನ್ಯಾಸ, ಚಚೆ೯, ಪ್ರಶ್ನೋತ್ತರ ಹೀಗೆ ಬಿಡುವಿಲ್ಲದೆ ನಡೆದವು. ಮಧ್ಯ ಚಹಾ, ಊಟ ಸಮಯಕ್ಕೆ ಸರಿಯಾಗಿ ಏಪಾ೯ಡು ಮಾಡಿದ್ದರು. ಸೂರ್ಯಕೀರ್ತಿ ಹಾಗೂ ಶಂಕರ ಅವರ ಓಡಾಟ ಮದುವೆ ಮನೆಯಲ್ಲಿ ಓಡಾಡಿದಂತೆ ಎಲ್ಲರಿಗೂ ಸಮಾಧಾನದಿಂದ, ಮುಗುಳ್ನಗೆಯಿಂದ ಉತ್ತರಿಸುವ ಮಾತಾಡುವ ರೀತಿ ನಮ್ಮನ್ನು ಮಂತ್ರ ಮುಗ್ಧರನ್ನಾಗಿಸಿತ್ತು. ಇಂದಿನ ಆಧುನಿಕ ತಾಂತ್ರಿಕ ದಿನಗಳಲ್ಲಿ ಹೊಸ ಹೊಸ ಟ್ರೆಂಡ್-ಗಳಲ್ಲಿ ಇರುವ ಯುವಕರ ಮಧ್ಯೆ ಇಂತಹ ಸರಳ ಸಜ್ಜನಿಕೆಯ ಹುಡುಗರು ಬಹಳ ಅಪರೂಪ. ಅವರ ಸಾಹಿತ್ಯ ಪ್ರೇಮ, ಕ್ರೀಯಾ ಚಟುವಟಿಕೆಗಳು, ಬದ್ಧತೆಗೆ ಹ್ಯಾಟ್ಸಪ್ ಹೇಳಲೇಬೇಕು. ರಾತ್ರಿ ಊಟದ ನಂತರ ಬೆಳಿಗ್ಗೆ ಮೂರು ಗಂಟೆಗೆ ಏಳಬೇಕು ಎಂದು ನವಿಲು ಕಲ್ಲು ಗುಡ್ಡ, ಚಿಬ್ಬಲು ಗುಡ್ಡ, ಹಿರೇಕೊಡಗಿ ಹೋಗಲು ರೆಡಿ ಇರಲು ಸೂಚಿಸಿದರು. ಮೊದಲನೇ ದಿನ ಶೇ 50% ರಷ್ಟು ಒಬ್ಬರಿಗೆ ಪರಿಚಯವಾಗಿತ್ತು. ಬಹಳಷ್ಟು ಶಿಬಿರಾಥಿ೯ಗಳು ಅವರ ಪಾಡಿಗೆ ಅವರಿದ್ದರು. ನಾವು ಸೀನಿಯರ್ ಸಿಟಿಜನ್ ಮೂರು ಜನ ಮಾತ್ರ ನಾನು, ಅಮರೇಗೌಡ ಪಾಟೀಲ್ ಮತ್ತು ಗೋವಿಂದ ಭಟ್ಟರು. ನಾವುಗಳು ಎಲ್ಲ ಯುವಕರೊಂದಿಗೆ ಎರಡು ದಿನಗಳ ಕಾಲ ಸ್ವಲ್ಪ ಯುವಕರಾಗಿಯೇ ಇದ್ದೆವು. ರಾತ್ರಿ ಬಹಳ ಹೊತ್ತಾದರೂ ದಣಿದ ದೇಹಕ್ಕೆ ನಿದ್ದೆ ಬರಲಿಲ್ಲ. ಕಾರಣ ಜಾಗ ಮತ್ತು ಹೊಸ ಹೊಸ ಗೊರಕೆ ಶಬ್ದಗಳು. ವಿಭಿನ್ನ ತರಹದ ಸೌಂಡ್ ರೈಲು ಬಂದ ಹಾಗೆ, ವಿಮಾನ ದೂರದಲ್ಲಿ ಹೋದ ಹಾಗೆ, ಏಕೋಪ್ರಕಾರದ ಹಾಗೂ ಬಿಟ್ಟು ಬಿಟ್ಟು ಬರುವ ಶಬ್ದದ ನಡುವೆ ನಿದ್ದೆ ಬರದೆ ಕೊನೆಗೆ ಚಳಿಯಾದರೂ ಪರವಾಗಿಲ್ಲ ಎಂದು ಹೊರಗೆ ಬಂದು ಮಲಗಿದೆ. ನಂತರ ಮೂರು ಗಂಟೆಗೆ ಎಬ್ಬಿಸುವ ಕೆಲಸ ಪ್ರಾರಂಭವಾಯಿತು. ಎಲ್ಲರೂ ಎದ್ದು ತಮಗೆ ಬೇಕಾದ ಬಟ್ಟೆಗಳನ್ನು ಹಾಕಿಕೊಂಡು ಬಸ್ನಲ್ಲಿ ನವಿಲು ಕಲ್ಲು ಬೆಟ್ಟದ ಕಡೆಗೆ ಪ್ರಯಾಣಿಸಿದೆವು. ನಾಲ್ಕೈದು ಕಿ.ಮಿ. ಹೋದನಂತರ ನಡೆದು ಹೋಗಲು ತಯಾರಾದೆವು. ಮೊದ ಮೊದಲು ಕಚ್ಚಾ ರಸ್ತೆ, ನಂತರ ಕಂಕರಗಳಿಂದ ಕೂಡಿದ ಎಡಕ್ಕೆ ಬಲಕ್ಕೆ ದಟ್ಟ ಅರಣ್ಯವಿದ್ದ ರಸ್ತೆಯಲ್ಲಿ ಮಧ್ಯೆ ಕಾಲು ಜಾರುವ ಕೆಸರು ಹೀಗೆ ಎಲ್ಲರೂ ಮೊಬೈಲ್ ಬ್ಯಾಟರಿ ಸಹಾಯದಿಂದ ಸಾಗಿದೆವು. ಈ ದಾರಿ ತೋರಿಸುವ ರುವಾರಿ ಮಿತ್ರ ಹಕೀಮ ನಮ್ಮನ್ನು ಗುಡ್ಡಕ್ಕೆ ಕರೆದೊಯ್ಯುವ ಮಾಗ೯ದಶಿ೯. ಸ್ವಲ್ಪ ದೂರ ನಡೆದ ಮೇಲೆ ಮರ ಬಿದ್ದು ದಾರಿ ಬಂದಾಗಿತ್ತು. ಇದೇನು “ದಾರಿ ಕಾಣದಾಗಿದೆ” ಎಂಬ ಸಿನಿಮಾ ಭಕ್ತಿ ಗೀತೆ ನೆನಪಾಯಿತು. ನಂತರ ಹಕೀಮ ಪಕ್ಕದ ಕಿರು ದಾರಿ ಮೂಲಕ ಮತ್ತೆ ಮುಖ್ಯ ರಸ್ತೆಗೆ ತಲುಪಿ, ಸುಮಾರು ಐದು ಗಂಟೆಗೆ ಎತ್ತರ ಬೆಟ್ಟ ತಲುಪಿದೆವು. ಹೇಗೆ ದಾರಿ ಸಾಗಿತು ಹೇಗೆ ತಲುಪಿದೆವು ಎಂಬುದೆ ಬಹಳ ಆಶ್ಚರ್ಯ…!

ನಾನಂತೂ ರಾತ್ರಿ ಹೋಗಬಾರದೆಂದು ತೀಮಾ೯ನಿಸಿ ಶಂಕರ ಅವರಿಂದ ರಿಯಾಯಿತಿ ಪಡೆದಿದ್ದರೂ ಗುಂಪಿನಲ್ಲಿ ಗೋವಿಂದ ಎನ್ನುವಂತೆ ಕೊನೆಗೆ ಹೋಗಲು ನಿಧ೯ರಿಸಿ ಕಾಲು ನೋವು ಮರೆತು ಹೋದೆ. ಆಶ್ಚರ್ಯವೆಂದರೆ ನಾಲ್ಕು ಕಿ.ಮೀ. ನಡೆದು ಓಡಾಡಿದರೂ ಯಾವುದೇ ಕಾಲು ನೋವು ಆಗದೆ ಸಹಜವಾಗಿಯೇ ಇದ್ಧೆ. ನನಗೆ ಕಾಲು ಇದೆ ಎನ್ನುವುದು ಮರೆತಂತಾಗಿತ್ತು. ಬಹುಶಃ ಎಲ್ಲರೊಂದಿಗೆ ನಕ್ಕು ನಲಿದು ಮಾತನಾಡುತ್ತ ಹಾಗೂ ನಮ್ಮ ಜೊತೆ ಬಂದ ಸೋದರಿಯರಾದ ರುದ್ರಮ್ಮ ವಜ್ರಬಂಡಿ ಹಾಗೂ ಲಕ್ಷ್ಮೀ ಕಟ್ಟಿ ಇವರೊಂದಿಗೆ ತಮಾಷೆ ಮಾಡುತ್ತ ಹೋಗಿದ್ದರಿಂದ ನನ್ನ ಕಾಲು ಸ್ವಲ್ಪ ವಿಶ್ರಾಂತಿಗೆ ಹೋಗಿರಬಹುದು ಅಲ್ಲವೆ? ಲಕ್ಷ್ಮಿ ಕಟ್ಟಿ ಬರಿಗಾಲಲ್ಲಿ ನಡೆದು ಸಬಲೆ ಎನ್ನುವುದನ್ನು ಸಾಬೀತು ಮಾಡಿದರು. ಹಿರಿಯ ಮಿತ್ರ ಬೀರಪ್ಪ ಶಂಬೋಜಿ ಅವರ ಹಾಸ್ಯ ಚಟಾಕಿಗಳು, ಎಲ್ಲ ಮಿತ್ರರ ಸಹಕಾರದ ನುಡಿಗಳು ನಮ್ಮ ದಾರಿ ಸುಲಭವಾಗಿ ಸಾಗಲು ಪರೋಕ್ಷವಾಗಿ ಕಾರಣವಾದವು.

ಬೆಟ್ಟ ಹತ್ತಿದ ಮೇಲೆ ಇನ್ನೂ ಸ್ವಲ್ಪ ಕತ್ತಲು ಇತ್ತು. ಎಲ್ಲರಿಗೂ ಸುಯೋ೯ದಯ ನೋಡುವ ತವಕ ಆದರೆ ಆರು ಗಂಟೆಯಾದರೂ ಸೂಯ೯ ದಶ೯ನವಿಲ್ಲ. ಆದರೆ ನಮ್ಮ ಸೂಯ೯ ಮಾತ್ರ(ಸಂಘಟಕ ಸೂಯ೯ಕೀತಿ೯) ಆಗಾಗ್ಗೆ ದಶ೯ನ ನೀಡಿ ನಮಗೆಲ್ಲ ಸಲಹೆ ಸೂಚನೆಗಳನ್ನು ನೀಡುತ್ತಿದ್ದ. ಸುಮಾರು ಏಳು ಗಂಟೆಗೆ ಸ್ವಲ್ಪ ಹೊತ್ತು ಸೂಯ೯ ದಶ೯ನವಾದರೂ ಉದಯಿಸುವ ಸೂಯ೯ನನ್ನು ನೋಡಾಲಾಗಲಿಲ್ಲ. ನಂತರ ಅವರವರ ಮನೋಸೋ ಇಚ್ಛೆ ಫೋಟೋ ಕ್ಲಿಕ್ಕಿಸಿಕೊಂಡರು. ಎಲ್ಲರ ಗ್ರೂಪ್ ಫೋಟೋ ತೆಗೆಯಲಾಯಿತು. ನಾಡಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಸುತ್ತಲಿನ ಹಸಿರು ಪರಿಸರ ಎಷ್ಟು ನೋಡಿದರೂ ಕಡಿಮೆ, ಇನ್ನೂ ಇನ್ನೂ ನೋಡಬೇಕೆನಿಸುವ ನಯನ ಮನೋಹರ ಸುಂದರ ಮೋಹಕ ದೃಶ್ಯ ಎತ್ತ ನೋಡಿದರತ್ತ ಹಸಿರೇ ಹಸಿರು, ಮೇಲೆ ತೇಲಿ ಬರುವ ಮೋಡಗಳು ದೂರದಲ್ಲಿ ನತಿ೯ಸುವ ಸಾಲು ಸಾಲು ಮೋಡಗಳು ಇವುಗಳನ್ನೆಲ್ಲ ನೋಡುತ್ತಿದ್ದರೆ ಮನುಷ್ಯ ಸಹಜವಾಗಿ ಭಾವುಕನಾಗಿ ಕವಿಯಾಗುವುದರಲ್ಲಿ ಆಶ್ಚರ್ಯವಿಲ್ಲ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಅಲ್ಲಿ ಕಳೆದು ಪುನಃ ಬಂದ ದಾರಿಯಲ್ಲಿ ಸಾಗಿದೆವು. ಈ ದುಗ೯ಮ ದಾರಿ ನೆನಪಿಟ್ಟುಕೊಂಡು ಎಲ್ಲಿಯೂ ದಾರಿ ತಪ್ಪದೆ ನಮ್ಮನ್ನೆಲ್ಲ ಕರೆದುಕೊಂಡು ಬಂದ ಶ್ರೀ ಹಕೀಮ ಮಿತ್ರನಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಇಂತಹ ದಾರಿಯಲ್ಲಿ ಎಪ್ಪತ್ತು ವಷ೯ದ ಹಿರಿಯರಾದ ಶ್ರೀ ಸಿದ್ದರಾಮಯ್ಯ ಅವರು ಹರೆಯದ ಯುವಕರಂತೆ ನಡೆದದ್ದು ನೋಡಿದರೆ ಯುವಕರನ್ನು ನಾಚಿಸುವಂತಿತ್ತು. ಅವರು ಸ್ವಲ್ಪವೂ ಆಯಾಸ, ಶ್ರಮ ಯಾವುದನ್ನು ತೋರದೆ ನಡೆದರು. ಅವರ ಕವಿ ಭಾವದ ಜೊತೆಗೆ ದೈಹಿಕ ಭಾವ ಕೂಡಾ ಗಟ್ಟಿಯಾಗಿತ್ತು ಅನಿಸುತ್ತದೆ.

ಹೀಗೆ ಒಲ್ಲದ ಮನಸ್ಸಿನಿಂದ ಹಿಂತುರಿಗಿ ಚಿಬ್ಬಲ ಗುಡ್ಡದ ಹತ್ತಿರ ತುಂಗಾ ನದಿ ಹಾಗೂ ಶ್ರೀ ಗಣೇಶ ಮಂದಿರ ನೋಡಿ ಸೀದಾ ಕುವೆಂಪು ಹುಟ್ಟಿದ ಮನೆ ಹಿರೇಕೊಡಿಗೆಗೆ ಹೋಗಿ ಅಲ್ಲಿ ಸಾಮೂಹಿಕ ಫೋಟೋ ತೆಗೆಸಿಕೊಂಡು ನಂತರ ನಮ್ಮ ಕಾಯ೯ಕ್ರಮದ ಸ್ಥಳಕ್ಕೆ ಬಂದು ಸ್ನಾನಾದಿಗಳನ್ನು ಮುಗಿಸಿ ಮತ್ತೆ ಶ್ರೀ ಅಮರೇಶ ನುಗಡೋಣಿ ಅವರ ಕಥಾ ಕಮ್ಮಟಕ್ಕೆ ಪಾಲ್ಗೊಂಡು, ಮಧ್ಯಾಹ್ನ ಸಿಹಿ ಹೋಳಿಗೆ ಊಟ ಮಾಡಿ ನಂತರ ಮುಕುಂದರಾಜ್ ಅವರಿಂದ ಕನ್ನಡ ಕಾವ್ಯ ಪರಂಪರೆಯ ಬಗ್ಗೆ ಅನುಸಂಧಾನದಲ್ಲಿ ಭಾಗವಹಿಸಿದೆವು. ಈ ಕಾಯ೯ಕ್ರಮ ಹೊರಗೆ ವಿಶಾಲವಾದ ಬಯಲಲ್ಲಿ ನಡೆಯಿತು ಇಲ್ಲಿ ಕಲ್ಲು ಬೆಂಚುಗಳೆ ಆಸನಗಳು ಒಂದು ತರಹ ವಿಧಾನಸಭಾ ಅಧಿವೇಶನದಂತೆ ಸುತ್ತಲೂ ಕುಳಿತುಕೊಂಡು ಶಿಬಿರಾಥಿ೯ಗಳು ಆಲಿಸಿದರು. ನಂತರ ಲಘು ಉಪಹಾರ (ಉತ್ತರ ಕನಾ೯ಟಕದ ಪ್ರಸಿದ್ಧ ಮಂಡಕ್ಕಿ ಒಗ್ಗರಣೆ ಹಾಗೂ ಮಿಚಿ೯ಭಜ್ಜಿ) ಸೇವಿಸಿ ಕವಿಶೈಲಕ್ಕೆ ಹೋಗಿ ಅಲ್ಲಿಯೇ ಪರಿಸರದ ನಡುವೆ ಕುವೆಂಪು ಸ್ಮಾರಕದ ಹತ್ತಿರ ಕವಿಗೋಷ್ಠಿ ನಡೆಯಿತು. ಈ ಮಧ್ಯೆ ಚಿಬ್ಬಲು ಗುಡ್ಡದಲ್ಲಿ ನನಗೆ ಜಿಗಣೆ ಯಾವ ಜನ್ಮದ ಮಿತ್ರನಾಗಿದ್ದನೊ ನನ್ನ ಎಡಕಾಲಿಗೆ ಚುಂಬಿಸಿ (ಕಡಿದು) ರಕ್ತ ಬರುವ ಹಾಗೆ ಮಾಡಿದ್ದರಿಂದ ರಕ್ತ ನಿಲ್ಲದೆ ಹಾಗೆ ಬರುತ್ತಾ ಇತ್ತು. ಟಿಸ್ಯೂ ಪೇಪರಿನಿಂದ ಒರೆಸುತ್ತ ಹಿಂದೆ ಕುಳಿತಿದ್ದೆ. ಕವಿಗೋಷ್ಠಿಗೆ ಒಲ್ಲದ ಮನಸಿನಿಂದ ಗೆಳೆಯ ಬೀರಪ್ಪ ಶಂಬೋಜಿ ಅವರ ಒತ್ತಾಯದ ಮೇರೆಗೆ ಕವನ ವಾಚನ ಮಾಡಿದೆ. ಅದಾಗಲೇ ಶಂಬೋಜಿ ತನ್ನ ಕವನ ಮೂಲಕ ಎಲ್ಲರನ್ನೂ ಮನರಂಜಿಸಿದ್ದು ವಿಶೇಷವಾಗಿತ್ತು. ಕವಿಗೋಷ್ಠಿ ನಂತರ ಸೀದಾ ಕವಿಮನೆ ನೋಡಿಕೊಂಡು ಹೊರ ಬಂದಾಗ ಮೋಡ ಬಂದು ಸಣ್ಣಗೆ ಮಳೆ ಬರುತ್ತಿದ್ದರಿಂದ ನಮ್ಮ ಸ್ಥಳಕ್ಕೆ ಬಂದು ನಮ್ಮ ಲಗೇಜ್ ರೆಡಿ ಮಾಡಿಕೊಂಡು ಅವಸರದಿಂದ ಹೊರಡಲು ಅಣಿಯಾದೆವು. ಎರಡನೇ ದಿನ ಬಹಳಷ್ಟು ಜನರು ಪರಿಚಯವಾದರು ಅದರಲ್ಲೂ ಶ್ರೀ ಅಮರೇಗೌಡ ಪಾಟೀಲ ಅವರು ಬಹಳ ಆತ್ಮೀಯರಾದರು. ಅವರು ಸದಾ ತಮ್ಮ ದೊಡ್ಡ ಕ್ಯಾಮೆರಾದೊಂದಿಗೆ ಕಾಣಸಿಗುತ್ತಿದ್ದರು. ಎಲ್ಲ ನಿಸರ್ಗದ ಸುಂದರ ದೃಶ್ಯಗಳನ್ನೂ ಸೆರೆ ಹಿಡಿದರು. ಕೆಲವೊಂದು ಸನ್ನಿವೇಶದಲ್ಲಿ ನಮ್ಮನ್ನು ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದಾರೆ. ಅವರ ಉತ್ಸುಕತೆ ನಮಗೆಲ್ಲ ಮಾದರಿ ಎನಿಸಿತು. ನನ್ನ ಮಿತ್ರರಾದ ಶ್ರೀ ಶೈಲ, ಶಿವರಾಜ್ ದಿನ್ನಿ ಹಾಗೂ ಶಂಕುಸುತ ಮಹಾದೇವ ಇವರು ಕಿರಿಯರಾದರೂ ನನಗೆ ಹಿರಿತನದ ಗೌರವ ನೀಡಿ, ನನಗೆ ಸಹಕಾರ ನೀಡಿ ಇನ್ನಷ್ಟು ಅಭಿಮಾನ ಮೂಡುವಂತೆ ಮಾಡಿದರು.

ಕೊನೆಗೆ ಶ್ರೀ ಅಮರೇಗೌಡ ಪಾಟೀಲ್ ನಮ್ಮನ್ನು ತೀಥ೯ಹಳ್ಳಿಯವರೆಗೆ ಡ್ರಾಪ್ ಮಾಡಿದರು. ಸೂಯ೯ಕೀರ್ತಿ ಹಾಗೂ ಶಂಕರ್ ಅವರಿಗೆ ಹೋಗಿ ಬರುವುದಾಗಿ ಹೇಳಲು ನನಗೆ ಮಾತೇ ಬರದಂತಾಗಿ ಸ್ವಲ್ಪ ಭಾವುಕನಾದೆ. ಆದರೂ ಅವರಿಂದ ಬೀಳ್ಕೊಟ್ಟು ಹೋಗಬೇಕಾಯಿತು. ನಂತರ ತೀಥ೯ಹಳ್ಳಿಗೆ ಬಂದು ನಂತರ ಶಿವಮೊಗ್ಗದಿಂದ ರಾಯಚೂರು ಸೇರಿದಾಗ ಬೆಳಿಗ್ಗೆ ಆರು ಗಂಟೆಯಾಗಿತ್ತು. ಸಿನಿಮಾ ರೀಲ್ ನಂತೆ ಎಲ್ಲವೂ ಕಣ್ಣ ಮುಂದೆ ಕ್ಷಣ ಹೊತ್ತು ಬಂದು ಹೋದಂತೆ ಭಾಸವಾಯಿತು.

ಇಂತಹ ಅವಕಾಶ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ ಅಲ್ಲವೆ?

ಎರಡು ದಿನದ ಒಡನಾಟ, ಸ್ನೇಹ, ಹಿರಿಯರ ಮಾಗ೯ದಶ೯ನ, ಸಂಘಟಕರ ಸೌಜನ್ಯದ ನುಡಿಗಳು, ನಗು, ಹಾಸ್ಯ, ಚಚೆ೯, ಕೆಲವರ ವಿಷಯ ಮಂಡನೆ ಹೀಗೆ ಹಲವು ಸನ್ನಿವೇಶಗಳನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು ಮತ್ತೆ ಅವಕಾಶ ಸಿಕ್ಕರೆ ನಮಗೆ ಸಮಯಾವಕಾಶ ಇದ್ದರೆ ಪುನಃ ಭೇಟಿಯಾಗೋಣ ಮಿತ್ರರೆ.

ಒಬ್ಬ ಕವಿ ಹೇಳಿದ ಹಾಗೆ

“ಹತ್ತಿರದ ಪ್ರಿಯ ಜನರು
ಎಲ್ಲಿದ್ದರೇನಂತೆ
ನಿತ್ಯ ನೆನೆಯುವ ಮನಕೆ
ತೀರ ಸನಿಹ”

ಚಂದಾದಾರರಾಗಿ
ವಿಭಾಗ
10 ಪ್ರತಿಕ್ರಿಯೆಗಳು
Inline Feedbacks
View all comments
super win
6 April 2026 15:03

Trying my luck with super win these days! There really is a selection on the site. Worth checking out and potentially winning big super win!

pwin
6 April 2026 15:03

Heard about pwin from a friend. Figured I’d give it a shot. Not bad! Pretty standard stuff, but everything worked smoothly. Give it a look see pwin.

pkrslot
6 April 2026 15:02

If you are a fan of slot games give pkrslot a go. Lots of slot variety and can be a fun way to unwind. Check them out pkrslot!

9777cxgame
27 March 2026 23:13

Alright, 9777cxgame. Gave ’em a try. Selection is alright. Nothing too crazy, but some old favorites are there. Worth a look if you’re bored: 9777cxgame

88ivina
27 March 2026 23:13

88ivina… gotta say, the layout is clean. Found a couple games I hadn’t seen before. Not a bad way to kill some time. Give it a whirl: 88ivina

laemmlenoho7
27 March 2026 23:12

Heard some buzz about Laemmlenoho7. Gave it a shot. Site’s pretty smooth, nothing crazy special but it works. Good selection of games. Worth a peek: laemmlenoho7

399betapp
6 January 2026 04:25

399BetApp just made things easier for me, placing bets is easier than ever. Get on the action with this app. Super easy and smooth. Download the app and get betting! 399betapp

100winapp
31 December 2025 21:52

Downloading the 100winapp now! Seems convenient to have on the go. Fingers crossed for some mobile wins! Definitely worth a look: 100winapp

1888vbet
21 December 2025 05:24

1888vbet, checking in! Found some great deals on this site. The whole platform is pretty easy to navigate. Happy to report a win, too. Give it a look! 1888vbet

ಸುರೇಶ್ ಕಲ್ಲೂರ್
17 August 2024 15:33

ಸುಂದರ ಬರವಣಿಗೆ… 👌👌👌👌

0
    0
    Your Cart
    Your cart is emptyReturn to Shop