ಎಸ್.ಪಿ. ಮಹದೇವ ಹೇರಂಬ ಅವರು ಬರೆದ ಕವಿತೆ ‘ಮನುಜ ಕುಲ’

ಕುಲವಾವುದಾದರೇನು
ಮನವ ಅರಿತರೇ ಸಾಕು
ಮಾನವೀಯತೆಯ
ನೆಲೆಯಲ್ಲಿ ನಾವಿರಬೇಕು

ಕುಲದಗೊಡವೆಯು ಬೇಡ
ಕಲ್ಮಶದ ಕಸವ ಎಸೆದು
ಕಾಯಕದ ಎದೆಯಬೆಸೆದು
ಕದವ ತೆರೆಯಲೇಬೇಕು

ಸಮಾಜದ ಸ್ವಾಸ್ಥ್ಯವ
ಕದಡುವವರ ಕೆನ್ನೆಗೆರಡು
ಬಾರಿಸಿ ಸರಿಯಾದ ದಾರಿ
ತೋರಿಸಬೇಕು

ಕಾಲನೆದುರು ಉದುರಿ
ಹೋಗುವ ಈ ಮೂರು
ದಿನದ ಬದುಕನ್ನು
ಸದಾ ಸ್ಮರಿಸುತ್ತಾ
ಸುಂದರಗೊಳಿಸಬೇಕು

ನಿಮ್ಮೊಳಗಿನ
ನೆನಪಿನ ಬುತ್ತಿ
ಆಗಾಗ್ಗೆ ಬಿಚ್ಚುತಾ
ಹಂಚುತಲಿರಬೇಕು

ಅಂತಸ್ತಿನ ಎಲ್ಲೆ ದಾಟಿ
ನಮ್ಮೊಳಗಿನ ಅಂತಸತ್ವವ ಮೀಟಿ
ಮನುಜ ನೀತಿಯ ಸಾರುತ್ತಾ
ಸಾಗುತ್ತಿರಬೇಕು

ಎಸ್.ಪಿ. ಮಹದೇವ ಹೇರಂಬ
ಗ್ರಂಥಪಾಲಕರು ಎಂ.ಇ.ಎಸ್ ಪ.ಪೂ ಕಾಲೇಜು
ಬೆಂಗಳೂರು

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
ಡಾ.ಟಿ.ಯಲ್ಲಪ್ಪ
13 June 2023 11:01

ಹೇರಂಭ ಅವರ ಕವಿತೆಯ ಆಶಯ ಚೆನ್ನಾಗಿದೆ

0
    0
    Your Cart
    Your cart is emptyReturn to Shop