ಅರವಿಂದ ಜಿ. ಜೋಷಿ ಮೈಸೂರು ಅವರು ಬರೆದ ಕವಿತೆ ‘ಓರ್ವ ವಿರಹಿಯ ಕೂಗು’

ಓ, ಎನ್ನ ಮನದನ್ನೆ…
ಒಲವಿನ ನೋಟ ಬೀರಿ
ನೀ, ಹೀಗೆ ಬಂದು ಹಾಗೆ
ಹೋಗುವುದ್ಯಾತಕೆ?

ಕುಗ್ಗಿದ ಮನವ ಅರಳಿಸಿ
ಮತ್ತೆ ಗೆಲುವು ಮೂಡಿಸಲು
ನೀ- ಬರಬಾರದೇತಕೆ?

ಜನಕೆ ಹೆದರಿ, ನೀ ದೂರ
ಸರಿದರೆ-ಎನ್ನ ಹೂ ಮನವು
ಬಾಡುವುದೆಂದು ತಿಳಿಯದ್ಯಾತಕೆ?

ಒಲವಿದ್ದರೆ ಅಲ್ಲಿ ಗೆಲುವು
ಗೆಲುವು ಇದ್ದೆಡೆ ಅಲ್ಲಿ ನಲಿವು
ಎನುವುದು ಹೇಳಿ ಕೊಡಬೇಕೆ?

ಸುಡುವ ವಿರಹಾಗ್ನಿ ಮನದ
ನೆಮ್ಮದಿಯನು ಸುಡುವುದೆಂದು
ನಿನಗೆ ಅರಿಯದ್ಯಾತಕೆ?

ಹೆಚ್ಚು ಕಾಡದೇ, ಇನ್ನು ಹುಚ್ಚು
ಹಿಡಿಯುವ ಮುನ್ನ – ನೀ
ಒಮ್ಮೆ ಕಾಣಬಾರದೇತಕೆ?

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop