ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ “ವಿದಿಶಾ ಪ್ರಹಸನ” ಅನುವಾದದ ನಾಟಕ ಕೃತಿಗೆ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಪ್ರಕಟವಾಗಿದೆ. ಮುಖ್ಯ ತೀರ್ಪುಗಾರರ ತಂಡದಲ್ಲಿ ಹಿರಿಯ ಸಾಹಿತಿಗಳಾದ ಧರಣೇಂದ್ರ ಕುರ್ಕುರಿ, ಪುಷ್ಪಾ ಎಚ್.ಎಲ್. ಮತ್ತು ಡಾ. ನಾ. ದಾಮೋದರ ಶೆಟ್ಟಿ ಇದ್ದರು. ಕೊನೆಯ ಹಂತದಲ್ಲಿ ಚಿದಾನಂದ ಸಾಲಿ ಅವರ “ಸ್ವಪ್ನಲಿಪಿ”, ಎಚ್.ಎಸ್. ನಾಗಭೂಷಣ ಅವರ “ಚಾಂಡಾಳನೊಬ್ಬನ ಆತ್ಮವಿಮರ್ಶೆ”, ವಿಕ್ರಮ ವಿಸಾಜಿ ಅವರ “ದೇಹವೇ ದೇಶ”, ಮೇಟಿ ಮಲ್ಲಿಕಾರ್ಜುನ ಅವರ “ಕನ್ನಡವೇ ಕಣ್ಣಾಗಿ, ಕಣ್ಣೇ ಕನ್ನಡಿಯಾಗಿ”, ದು. ಸರಸ್ವತಿ ಅವರ “ನಾವು ಇತಿಹಾಸ ಕಟ್ಟಿದೆವು: ಅಂಬೇಡ್ಕರ್ ಚಳುವಳಿಯ ಮಹಿಳೆಯರು” ಸೇರಿದಂತೆ ಒಟ್ಟು ೬ ಕೃತಿಗಳು ಇದ್ದವು.
ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ
ಚಂದಾದಾರರಾಗಿ
0 ಪ್ರತಿಕ್ರಿಯೆಗಳು