ಛಂದ ಪುಸ್ತಕ ಪ್ರಕಾಶನ ನಡೆಸುವ ೨೦೨೫ನೇ ಸಾಲಿನ ಛಂದ ಪುಸ್ತಕ ಬಹುಮಾನಕ್ಕೆ ಕಥೆಗಾರರಾದ ಗುರುರಾಜ ಕುಲಕರ್ಣಿ ಅವರ “Codeಗನ ಕಥೆಗಳು” ಹಸ್ತಪ್ರತಿ ಭಾಜನವಾಗಿದೆ. ಈ ಪ್ರಶಸ್ತಿಯು ಸಂಕಲನ ಪ್ರಕಟಣೆಯ ಜೊತೆಗೆ ನಲವತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಹಿರಿಯ ಸಾಹಿತಿಗಳಾದ ಡಾ. ಬಸವರಾಜ ಕಲ್ಗುಡಿ ಅವರು ಬಹುಮಾನವನ್ನು ವಿತರಿಸಿದರು. ಇದರ ಜೊತೆಗೆ ಈ ಬಾರಿ ಆರು ಜನ ಕಥೆಗಾರರಿಗೆ ಮೆಚ್ಚುಗೆ ಬಹುಮಾನವನ್ನು ನೀಡಲಾಗಿದೆ. ಹಿರಿಯ ಸಾಹಿತಿಗಳಾದ ವಸುಮತಿ ಉಡುಪ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಮೆಚ್ಚುಗೆಯ ಬಹುಮಾನ ಪಡೆದವರು:
- ದೀಪಾ ಹಿರೇಗುತ್ತಿ
- ಮೋಹನ್ ಕುಮಾರ್ ಬಣಕಾರ
- ಸಣ್ಣಳ್ಳಿ ಹನುಮಂತ
- ಶೀಲಾ ಪೈ
- ಕುಸುಮಾ ಆಯರಹಳ್ಳಿ
- ಶ್ರೀಧರ ಹೆಗಡೆ