ಕಾಡುವ ಕಿರಂ 2023 ದಶಮಾನೋತ್ಸವ ಕಾರ್ಯಕ್ರಮ ಆಗಸ್ಟ್ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ!

ಜನ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಸಂಸ್ಥೆ ಮತ್ತು ಬೆಂಗಳೂರು ಆರ್ಟ್ ಫೌಂಡೇಷನ್ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮವು ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಕಾಡುವ ಕಿರಂ 2023 ದಶಮಾನೋತ್ಸವ ಕಾರ್ಯಕ್ರಮವು ಆಗಸ್ಟ್ 7 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಹೋರಾತ್ರಿ ನಡೆಯಲಿದೆ. ಕಿರಂ ಅವರ ನೆನಪಿಗಾಗಿ ಅವರು ದೇಹಾಂತ್ಯ ಮಾಡಿದ ದಿನದಂದೇ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ನಾಡಿನ ಬಹುತೇಕ ಬೇರೆ ಬೇರೆ ಜಿಲ್ಲೆಗಳ ಒಟ್ಟು ನೂರು ಜನ ಕವಿಗಳು ಐದು ಕವಿಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯಿಂದ ಸಂಪಾದಿತ ಕವಿತೆಗಳ ಮತ್ತು ಆಯಾ ಗೋಷ್ಠಿಗಳ ವಿಮರ್ಶೆ ಇರುವ ಕಿರಂ ಹೊಸ ಕವಿತೆ 2023 ಪುಸ್ತಕವು ಬಿಡುಗಡೆಯಾಗಲಿದೆ.

#ಆಗಸ್ಟ್7,2023,ಸೋಮವಾರಸಂಜೆ6ರಿಂದಬೆಳಿಗ್ಗೆ6ರವರೆಗೆ
#ಸ್ಥಳ,ಬೆಂಗಳೂರಿನ,ರವೀಂದ್ರ,ಕಲಾಕ್ಷೇತ್ರ
#ಜನಸಂಸ್ಕೃತಿಪ್ರತಿಷ್ಠಾನಬೆಂಗಳೂರು
#ಬೆಂಗಳೂರು ಆರ್ಟ್ ಫೌಂಡೇಷನ್
#ಮಿಂಚುಳ್ಳಿ ಸಾಹಿತ್ಯ ಪತ್ರಿಕೆ

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
ಮರುಳಸಿದ್ದಪ್ಪ ದೊಡ್ಡಮನಿ
15 July 2023 20:28

ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ನಾಡಿನ ಅಸ್ಮಿತೆ

0
    0
    Your Cart
    Your cart is emptyReturn to Shop