ನಾನಂದುಕೊಂಡೆ,
ದೀಪ ಬೆಳಕಿನ ಸಂಕೇತ
ಕತ್ತಲದರ ವಿರೋಧಿಯಂತೆ.
ನಾನಂದುಕೊಂಡೆ,
ದೀಪ ದಾರಿ ತೋರುವ ಮಿಂಚು
ಕಣ್ಣು ಕಟ್ಟುವ ಪರದೆಯಲ್ಲ
ನಾನಂದುಕೊಂಡೆ,
ದೀಪ ಪತಂಗಗಳ ಸೆಳೆಯುವ ಅಪ್ಸರೆ
ಸುಡುವ ಸಿಡಿಲಲ್ಲ
ನಾನಂದುಕೊಂಡೆ,
ದೀಪ ಜ್ಞಾನದ ಚೈತನ್ಯ
ಅಜ್ಞಾನದ ಪರಮಾವಧಿಯಲ್ಲ
ನಾನಂದುಕೊಂಡೆ,
ಎಲ್ಲವೂ ನಿಜವಾಗುತ್ತಿದೆ
ಏಷ್ಟು ಚಂದ ಅಲ್ಲವೇ?
ಆದರೆ ಮನಸ್ಸು ಎಚ್ಚರಿಸಿತು
ದೀಪದ ಬುಡ ಎಂದಿಗೂ ಕತ್ತಲಲ್ಲವೆ?
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
(ದಿನಾಂಕ 6 ಏಪ್ರಿಲ್ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…