ಇಂದು ಹೊಸ ದಿನ
ತಂದ ಸೂರ್ಯನು
ಹೊಂಬೆಳಕಿನಲಿ
ರಥವೇರಿ ಬಂದ
ಹಕ್ಕಿಗಳು ಹಾಡಿದವು
ನವಿಲುಗಳು ನರ್ತಿಸಿದವು
ಕಾಡು ಕಣಿವೆಗಳಿಂದ
ತಂಗಾಳಿ ಬೀಸಿ ಬಂದವು
ಮಿಂದು ಮಡಿಯಲ್ಲಿ
ಮನೆ ಮುಂದೆ ರಂಗೋಲಿ
ಅರಳಿದವು ಹೆಂಗಳೆಯರ
ಎಳೆ ಬೆರಳುಗಳಿಂದ
ಗಂಧ ಕರ್ಪೂರದ
ಘಮಲು ಮನೆ ಮನೆಯ
ಮನ ಮನದ ಅಂಗಳಕೆ
ಸುಳಿ ಸುಳಿದು ಸುವಾಸನೆ
ಬೀರಿದವು
ಮಕ್ಕಳೆಲ್ಲರೂ ಕಿಲಕಿಲ
ಮುದ್ದು ಮಾತುಗಳನ್ನಾಡುತ್ತಾ
ಮನೆಮಂದಿಯ ಮನದೊಳಗೆ
ಮುತ್ತುಗಳ ಚೆಲ್ಲಿದರು
ಮಾವು ಬೇವುಗಳು
ನಲಿವು ನೋವುಗಳ
ತೋರಣವಾಗಿ ತಲೆ ಬಾಗಿಲಲ್ಲಿ
ಕೂಗಿ ಹೇಳಿದೆವು
ಇಂದು ಹೊಸ ದಿನ ಎಂದು!
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
[6120]oklv bet login করুন - বিকাশ পেমেন্ট ও সেরা স্লট গেম সাইট,oklv bet-এ লগইন করে উপভোগ করুন সেরা স্লট গেম। বিকাশ দিয়ে অনলাইন ক্যাসিনো গেম খেলুন এবং সহজে oklv bet app download করে আজই শুরু করুন। visit: oklv bet