ಈಗೀಗ ಅಪ್ಪ
ಮೌನವನ್ನು ಹೊದ್ದುಕೊಂಡು
ಧ್ಯಾನಿಯಾಗಿದ್ದಾನೆ
ಥೇಟ್ ಬುದ್ದನಂತೆ
ನೊಂದ ಬೆಂದ ಕಥೆಗಳನ್ನೆಲ್ಲಾ
ತನ್ನೊಡಲ ಮನೆಯಲಿ
ಕಾಪಿಟ್ಟುಕೊಂಡು ಮುಗುಳ್ನಗುತಿರುವನು
ಮೊದಲೆಲ್ಲಾ ಹಾದಿ ತಪ್ಪಿ ನಡೆದರೆ
ಬೈಯ್ಯುತ್ತಿದ್ದ ಬೆದರಿಸುತ್ತಿದ್ದ
ಸಾಧನೆಯ ಹಾದಿ ತುಳಿ ಎನ್ನುತ್ತಿದ್ದ
ಬೆನ್ಮ ಹಿಂದಿನ ಬೆಳಕಾಗಿ
ನೀರನೆರಳಿನಂತೆ ಜತೆ ನಿಲ್ಲುತ್ತಿದ್ದ
ಪ್ರೋತ್ಸಾಹದ ಬೆನ್ನು ಚಪ್ಪರಿಸಿ
ತನ್ನ ಕನಸಿನ ಗೋಪುರವನು
ಭರವಸೆಯ ಗೋಡೆಯನು
ಮಗನಲಿ ಕಟ್ಟಿ
ಓದಲೇಬೇಕೆಂದು ಎಂದೂ ಗದರಿಸಲಿಲ್ಲ
ನೆಚ್ಚಿದ ನೆಲಕೆ ಬೆವರು ಹರಿಸಿ
ಸಾಧನೆಗೆ ಸಾತ್ ನೀಡಿದ
ಅಪ್ಪ ಈಗೀಗ ಮೌನಿಯಾಗಿದ್ದಾನೆ.
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
👌😇🙏
ಧನ್ಯವಾದಗಳು ಮೇಡಂ