ಹೆಜ್ಜೆಯ ಜಾಡು ಹಿಡಿದು
ನೀ ನಡೆದು ಬಂದುಬಿಡು
ಅಲ್ಲಿ ನಿನಗಾಗಿ ಕಾದ
ಹೃದಯವೊಂದಿಹುದು
ಹೆಜ್ಜೆಯ ಗುರುತುಗಳೆಲ್ಲ
ಅಳಿಸಿ ಹೋಗುವ ಮುನ್ನ
ಸೇರಿಬಿಡು ಒಲವಿನೂರಿಗೆ
ಅಲ್ಲಿ ನಿನ್ನದೇ ಜಪವಿಹುದು
ನೀ ನಡೆವ ದಾರಿಯಲ್ಲಿ
ಹೆಜ್ಜೆ ಹೆಜ್ಜೆಗೂ ಹೂವಿನ
ಪರಿಮಳವ ಸಾರಿಸಿದ್ದೇನೆ
ಹೆಚ್ಚು ತ್ರಾಸಾಗದಿರಲೆಂದು
ನೀ ಬರುವ ಹಾದಿಯನ್ನೇ
ಎದುರು ನೋಡುವ ಹೃದಯಕ್ಕೆ
ನಿನ್ನ ಸೇರುವ ಬಯಕೆಯೊಂದೆ
ಹೆಮ್ಮರವಾಗಿಹುದು…
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…