ಕವಿತೆಗಳು

ಸಂತೋಷ್ ಟಿ ಅವರು ಬರೆದ ಕವಿತೆ ‘ನೀಲ ತಡಿಯಲಿ’

ಸಂಜೆ ಬಾನಿನ ಕೆಂಪು ನೇಸರ
ನೀಲ ತಡಿಯಲಿ ಇಳಿಯುವಾಗ
ನನ್ನೆದೆಯ ಹಕ್ಕಿಗಳು ಬಿಡದೆ ಎಳೆಯುವಾಗ
ಎಳೆದರು ಬಾರದಾಗ ನೇಸರ

ಮರು ಮಾತಿಲ್ಲದೆ ಮೌನ
ಉಕ್ಕುಕ್ಕುವುದು ನೀಲ ಕಡಲ ತಡಿಯಾಗಿ
ಚಣಚಣವು ಸೇರಿ ಗಂಟೆಯಾಗಿ
ಕಾಲ ಮಾಗಿದರು ಬರಲಿಲ್ಲ ನೀನು

ಕೋಗಿಲೆಯು ಕೂಗಿಕೂಗಿ ಗೋಣುಮುರಿದು
ಬಿಡಿವಾರವಾಕಿಕೊಂಡಿತು ಶಾಂತವಾಗಿ
ಆಸೆಯಕ್ಕಿಗಳೆಲ್ಲ ಗುಟುಕುತಿಂದು
ಗೂಡಿಗೆ ಬಂದವು ಚಿಲಿಪಿಲಿಯಾಗಿ

ಚಕ್ರವಾಕ ಗಿಣಿಗೊರವಂಕ ಗುಬ್ಬಿ
ಕಾಗೆ ಗೂಬೆ ಗಿಡುಗ ಕೃಷ್ಣಪಕ್ಷಿಗಳು
ಸಾಲುಸಾಲು ಮುಗಿಲ ಮಾಲೆಹಾಕಿ
ಗಸ್ತು ಹೊಡೆದು ಪಥಸಂಚಲನ ಮಾಡಿದವು

ನಿನ್ನ ಸನಿಹವಿಲ್ಲದೊತ್ತು ಶೂನ್ಯ ನಕಶಿಕಾಂತ
ತಂಬಿಟ್ಟ ತುಟಿ ಬಿರಿದ ಕೆಂಪುಗಲ್ಲ
ಬೀಸುವ ತಂಗಾಳಿಯಲೆಗಳಲಿ ಕಂಪನಗುಡುವ ಶಾಂತ
ಕೊರಲು ಕೂಗಿನ ಗಾನಸಲ್ಲ

ಕಣ್ಣಂಚಿನ ನೀರು ಸುರಿದು
ನೈದಿಲೆಯ ಅಪ್ಪಿಹುದು
ನೀನಿಲ್ಲದೊತ್ತಲ್ಲಿ ವಿರಹದಾವಗ್ನಿ
ಸುಡುವ ನರಕಯಾತನೆ ಸುಗ್ಗಿ

ಕಡಲೊಳಗೆ ಕಲ್ಲೆಸದರೆ ಕಂಪನ ಅಲೆಗಳು
ನೀಲ ತಡಿಯಲಿ ಬಾಳೆಮೀನುಗಳು
ಎದ್ದವು ಒಲವಿನಲಿ ಜೊತೆಯಾಗಿ
ಆದರೂ, ನಾನು ತಡಿಯಲಿ ಏಕಾಂಗಿಯಾಗಿ…

SHANKAR G

View Comments

  • Xojililink is where I always go when I want to find a good online casino. Fast payouts and responsive customer service sold me. Seriously, give it a try! Discover it now: xojililink

  • Pin77Login - seems reliable. No dramas logging in or out, which is always a plus! Good variety of games too. Give it a peek pin77login.

  • Hey guys, just wanted to say had some fun on jili0. Easy to navigate and cashed out without any problems. Give it a go jili0!

  • ಪ್ರೇಮ ಕವಿತೆ "ವಿರಹ ವೇದನೆ "ಸೊಗಸಾಗಿದೆ.

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

57 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

57 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

57 years ago