ಕವಿತೆಗಳು

ಪರಶುರಾಮನ ಎಸ್ ನಾಗುರು ಅವರು ಬರೆದ ಕವಿತೆ “ಕೇಳುವರಾರು?”

ಬಡವನ ಒಡಲದನಿ
ವರಸುವರಾರು
ನೊಂದ ಜನರ ಕಂಬನಿ

ಬರುವರು ಯಾರು ಎಂದು
ಕಾಯ್ದೆವು ಇನಿತು ದಿನ
ಬಂದರು ಬಹಳ ಜನ
ಇಲ್ಲ ಹೃದಯ ಕಿವಿ ಕಣ್ಣು

ಉಂಡವರು ಉಂಡುಂಡು
ಅರಗಿಸಿಕೊಂಡ್ರು
ನಮ್ಮ ಹಕ್ಕನ್ನೆ ,ನಾವು ಕೇಳಿದಾಗ
ಯಾರ್ಗೆ ಹೇಳ್ತಿ ಹೇಳು, ನಡೆ ಮುಂದೆ ಅಂದ್ರು

ಆಗೂ ಹೋಗುಗಳ ನೋಡುತ್ತಿದೆ
ಬಡವ ನಿನ್ನ ಬಿಡುಗಣ್ಣು
ನಿನ್ನ ಬಾಯಿಗೆ ಉಳ್ಳವರು
ಹಾಕುವರು ಹಿಡಿಮಣ್ಣು

ಭ್ರಷ್ಟಾಚಾರ ಮರವಾಗಿದೆ
ಬಡವನ ಬದುಕು ಕನಸು ನೆತ್ತರನೀರಿ
ಈ ಹಳ್ಳಿಗಳಲ್ಲಿ ಆ ದಿಲ್ಲಿಯಲ್ಲಿ
ಟಿಸಿಲೊಡೆದಿದೆ ದೇಶವನ್ನಾವರಿಸಿದೆ

ಭ್ರಷ್ಟಾಚಾರದಿಂದ
ಬಲವಂತರಾದರು ಕೆಲವರು
ಭ್ರಷ್ಟಾಚಾರದಿಂದ
ಬಳಲಿದರು ಹಲವರು

SHANKAR G

Share
Published by
SHANKAR G

Recent Posts

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

55 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

55 years ago

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago