ಕವಿತೆಗಳು

ಸುಕನ್ಯಾ ಶಿಶಿರ್ ಅವರು ಬರೆದ ಕವಿತೆ ‘ಅವಳು’

ಒಡಲೊಳಗೆ ಭಾವನೆಗಳ ನೂಕುನುಗ್ಗಲಿದೆ
ಮಾತುಗಳ ಹೆಬ್ಬಾಗಿಲಿಗೆ ಬೀಗ ಜಡಿದಿದ್ದಾಳೆ
ಹೊರಬರಲು ಹವಣಿಸುವ ಕಣ್ಣೀರ
ರೆಪ್ಪೆಯೊಳಗೇ ತಡೆದಿದ್ದಾಳೆ
ಬಹಳ ಮಾಗಿದ್ದಾಳೆ ಅವಳು….!

ಮನದ ಮಾತೆಲ್ಲ ಹೊರಬಂದರೆ
ಬದುಕು ಬಂಡೆಯೊಳಗಿನ ಬಿರುಕಿನಂತಾಗುವ
ಭಯವಿದೆ ಅವಳಿಗೆ
ಅವಳ ಮೌನದ ತೇಪೆ ಎಲ್ಲವನೂ ಸಂಭಾಳಿಸುತ್ತಿದೆ
ಬಹಳ ಮಾಗಿದ್ದಾಳೆ ಅವಳು….!

ಎಲ್ಲವೂ ಇದೆ, ಎಲ್ಲರೂ ಇಹರು
ಆದರೂ ಅವಳಿಲ್ಲಿ ಒಂಟಿ….
ಕಲಿತಿದ್ದಾಳೆ ಈಗ ಸದ್ದಿಲ್ಲದೇ ಬಿಕ್ಕುವುದನ್ನು
ಕಣ್ಣೀರಿಗೂ ಅರಿವಾಗದಂತಳುವುದನ್ನು
ಬಹಳ ಮಾಗಿದ್ದಾಳೆ ಅವಳು….!

ವಿರಾಗಿಯಾಗುವಳು ಕೆಲವೊಮ್ಮೆ
ಲೋಕದ ಹಂಗು ತನದಲ್ಲವೆಂದು….
ತೊಟ್ಟಿಲ ಕೂಸು ಚೀರಿದಾಗ
ಬೆಚ್ಚಿಬಿದ್ದು ತೂಗುವಳು, ಎದೆಗಪ್ಪಿಕೊಳ್ಳುವಳು…
ಬಹಳ ಮಾಗಿದ್ದಾಳೆ ಅವಳು….!

ತನ್ನೆಡೆಗಿನ ಗಮನಕ್ಕಾಗಿ ಹಪಹಪಿಸುತ್ತಾಳೆ
ಮರುಗುತ್ತಾಳೆ ಬೇರೆಲ್ಲರಿಗೂ ದೊರೆಯುವ ಪ್ರಾಶಸ್ತ್ಯ ತನಗಿಲ್ಲದಾಗ
ಕೊನೆಗೊಮ್ಮೆ ತನ್ನೆಡೆಗಿನ ನಿರ್ಲಕ್ಷ್ಯದೆಡೆಗೇ
ದಿವ್ಯ ನಿರ್ಲಕ್ಷ್ಯತಾಳುತ್ತಾಳೆ….
ಬಹಳ ಮಾಗಿದ್ದಾಳೆ ಅವಳು….!

ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಾಳೆ
ತನ್ನತನವೆಂಬುದೇ ಉಸಿರುಗಟ್ಟಿಸಿದಂತಾಗೆ
ಹಳೆಗುಜುರಿಯಂತದರ ಮೂಟೆಕಟ್ಟಿ
ಅಟ್ಟದ ಮೂಲೆಯಲೆಲ್ಲೋ ಎಸೆದು ಬಿಡುತ್ತಾಳೆ…
ಬಹಳ ಮಾಗಿದ್ದಾಳೆ ಅವಳು……!

ಹೌದು ಬಹಳ ಮಾಗಿದ್ದಾಳೆ ಅವಳು……!
ಲೋಕದ ದೃಷ್ಟಿಯಲ್ಲಿ….!!

SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago