ಕವಿತೆಗಳು

ಸುಕನ್ಯಾ ಶಿಶಿರ್ ಅವರು ಬರೆದ ಕವಿತೆ ‘ಅವಳು’

ಒಡಲೊಳಗೆ ಭಾವನೆಗಳ ನೂಕುನುಗ್ಗಲಿದೆ
ಮಾತುಗಳ ಹೆಬ್ಬಾಗಿಲಿಗೆ ಬೀಗ ಜಡಿದಿದ್ದಾಳೆ
ಹೊರಬರಲು ಹವಣಿಸುವ ಕಣ್ಣೀರ
ರೆಪ್ಪೆಯೊಳಗೇ ತಡೆದಿದ್ದಾಳೆ
ಬಹಳ ಮಾಗಿದ್ದಾಳೆ ಅವಳು….!

ಮನದ ಮಾತೆಲ್ಲ ಹೊರಬಂದರೆ
ಬದುಕು ಬಂಡೆಯೊಳಗಿನ ಬಿರುಕಿನಂತಾಗುವ
ಭಯವಿದೆ ಅವಳಿಗೆ
ಅವಳ ಮೌನದ ತೇಪೆ ಎಲ್ಲವನೂ ಸಂಭಾಳಿಸುತ್ತಿದೆ
ಬಹಳ ಮಾಗಿದ್ದಾಳೆ ಅವಳು….!

ಎಲ್ಲವೂ ಇದೆ, ಎಲ್ಲರೂ ಇಹರು
ಆದರೂ ಅವಳಿಲ್ಲಿ ಒಂಟಿ….
ಕಲಿತಿದ್ದಾಳೆ ಈಗ ಸದ್ದಿಲ್ಲದೇ ಬಿಕ್ಕುವುದನ್ನು
ಕಣ್ಣೀರಿಗೂ ಅರಿವಾಗದಂತಳುವುದನ್ನು
ಬಹಳ ಮಾಗಿದ್ದಾಳೆ ಅವಳು….!

ವಿರಾಗಿಯಾಗುವಳು ಕೆಲವೊಮ್ಮೆ
ಲೋಕದ ಹಂಗು ತನದಲ್ಲವೆಂದು….
ತೊಟ್ಟಿಲ ಕೂಸು ಚೀರಿದಾಗ
ಬೆಚ್ಚಿಬಿದ್ದು ತೂಗುವಳು, ಎದೆಗಪ್ಪಿಕೊಳ್ಳುವಳು…
ಬಹಳ ಮಾಗಿದ್ದಾಳೆ ಅವಳು….!

ತನ್ನೆಡೆಗಿನ ಗಮನಕ್ಕಾಗಿ ಹಪಹಪಿಸುತ್ತಾಳೆ
ಮರುಗುತ್ತಾಳೆ ಬೇರೆಲ್ಲರಿಗೂ ದೊರೆಯುವ ಪ್ರಾಶಸ್ತ್ಯ ತನಗಿಲ್ಲದಾಗ
ಕೊನೆಗೊಮ್ಮೆ ತನ್ನೆಡೆಗಿನ ನಿರ್ಲಕ್ಷ್ಯದೆಡೆಗೇ
ದಿವ್ಯ ನಿರ್ಲಕ್ಷ್ಯತಾಳುತ್ತಾಳೆ….
ಬಹಳ ಮಾಗಿದ್ದಾಳೆ ಅವಳು….!

ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಾಳೆ
ತನ್ನತನವೆಂಬುದೇ ಉಸಿರುಗಟ್ಟಿಸಿದಂತಾಗೆ
ಹಳೆಗುಜುರಿಯಂತದರ ಮೂಟೆಕಟ್ಟಿ
ಅಟ್ಟದ ಮೂಲೆಯಲೆಲ್ಲೋ ಎಸೆದು ಬಿಡುತ್ತಾಳೆ…
ಬಹಳ ಮಾಗಿದ್ದಾಳೆ ಅವಳು……!

ಹೌದು ಬಹಳ ಮಾಗಿದ್ದಾಳೆ ಅವಳು……!
ಲೋಕದ ದೃಷ್ಟಿಯಲ್ಲಿ….!!

SHANKAR G

Recent Posts

ರೇವಣಸಿದ್ಧಪ್ಪ ಜಿ.ಆರ್. ಅವರಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ರೇವಣಸಿದ್ಧಪ್ಪ ಜಿ.ಆರ್. ಅವರ "ಬಾಳ ನೌಕೆಗೆ ಬೆಳಕಿನ ದೀಪ" ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನವಕವಿಗಳ ಪ್ರಥಮ ಕೃತಿ ಪ್ರಶಸ್ತಿ.…

55 years ago

ಯುವ ವಿಮರ್ಶಕ ವಿನಯ ನಂದಿಹಾಳ ಅವರಿಗೆ 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದತ್ತಿ ಪ್ರಶಸ್ತಿ

ವಿನಯ್ ನಂದಿಹಾಳ್ ಅವರ "ಕಣ್ಣಂಚಿನ ಕಿಟಕಿ" ವಿಮರ್ಶಾ ಕೃತಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ ಪ್ರಕಟವಾಗಿದೆ.…

55 years ago

ಈ ಹೊತ್ತಿಗೆ ಪ್ರಶಸ್ತಿ ಪ್ರದಾನ ಸಮಾರಂಭ: ಮಾರ್ಚ್ 09, 2025

ಸಾಹಿತ್ಯಾಸಕ್ತರೆಲ್ಲರಿಗೂ ಆತ್ಮೀಯ ಸ್ವಾಗತ. ದಿನಾಂಕ: ೦೯ ಮಾರ್ಚ್ ೨೦೨೫ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ…

55 years ago

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ "ವಿದಿಶಾ ಪ್ರಹಸನ" ಅನುವಾದದ ನಾಟಕ ಕೃತಿಗೆ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ…

55 years ago

ಅರಳಿ ನೆರಳು ಕೃತಿ ಲೋಕಾರ್ಪಣೆ

ಅಭಿಜ್ಞಾನ ಪ್ರಕಾಶನ ಹಿಪ್ಪರಗ ಬಾಗ್ ತಾಲೂಕ ಬಸವಕಲ್ಯಾಣ ಜಿಲ್ಲಾ ಬೀದರ. ಹಾಗೂ ಸಾರನಾಥ ಪ.ಜಾ. ಸರ್ಕಾರಿ ನೌಕರರ ಪತ್ತಿನ ಸಹಕಾರ…

55 years ago