ನನಗೆ ಸಾಯುವುದಕ್ಕೆ ಇಷ್ಷವೇ
ನಿನ್ನ ಪ್ರೇಮದ ಮಡಿಲಲ್ಲಿ
ಮಾತ್ರ!
ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!
ನನಗೆ ಸಾಯುವುದಕ್ಕೆ ಇಷ್ಟವೇ
ನಿನ್ನ ಅಂಗಾಲಿನ ನೋವಿಗೆ
ಮುಲಾಮಗುತ್ತಾ
ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!
ನನಗೆ ಸಾಯುವುದಕ್ಕೆ ಇಷ್ಟವೇ
ರುರುವಿನಂತೆ ಅರ್ಧಾಯುಷ್ಯ ಧಾರೆಯೆರೆದು:
ನಿನ್ನೆಲ್ಲಾ ನೋವಿಗೂ
ನಾನಿರುವೆಯೆಂಬ ಭರವಸೆಯಾಗಿ
ಹೀಗೆ ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!
ನನಗೆ ಸಾಯುವುದಕ್ಕೆ ಇಷ್ಟವೇ
ನಿನ್ನ ಚೆಲುವ ಮುಂದೆ;
ನಿನ್ನ ಹದರ,ನಸುಗನ್ನೆ
ಅಂಗಾಲಿಗೆ ಮುತ್ತಿನ
ಮಳೆಸುರಿಸುತಾ
ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!
ನನಗೆ ಸಾಯುವುದಕ್ಕೆ ಇಷ್ಷವೇ
ನಿನ್ನ ಕಣ್ಣನೋಟಕ್ಕೆ
ಅರೆಕ್ಷಣ ಹೃದಯ ನಿಂತಾಗ
ನಿನ್ನ ಅಪ್ಪುಗೆಯ ಆಲಿಂಗನವ
ಬಯಸುತಾ
ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!
ಎಲ್ಲಿರುವೆ ಗೆಳತಿ ನೀನು..?
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…