ಕವಿತೆಗಳು

ಹರೀಶ್ ಎಸ್. ಅವರು ಬರೆದ ಕವಿತೆ ‘ಪ್ರೇಮ ಸಾಂಗತ್ಯ’

ನನಗೆ ಸಾಯುವುದಕ್ಕೆ ಇಷ್ಷವೇ‌‌‌
ನಿನ್ನ ಪ್ರೇಮದ ಮಡಿಲಲ್ಲಿ
ಮಾತ್ರ!
ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!

ನನಗೆ ಸಾಯುವುದಕ್ಕೆ ಇಷ್ಟವೇ
ನಿನ್ನ ಅಂಗಾಲಿನ ನೋವಿಗೆ
ಮುಲಾಮಗುತ್ತಾ
ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!

ನನಗೆ ಸಾಯುವುದಕ್ಕೆ ಇಷ್ಟವೇ
ರುರುವಿನಂತೆ ಅರ್ಧಾಯುಷ್ಯ ಧಾರೆಯೆರೆದು:
ನಿನ್ನೆಲ್ಲಾ ನೋವಿಗೂ
ನಾನಿರುವೆಯೆಂಬ ಭರವಸೆಯಾಗಿ
ಹೀಗೆ ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!

ನನಗೆ ಸಾಯುವುದಕ್ಕೆ ಇಷ್ಟವೇ
ನಿನ್ನ ಚೆಲುವ ಮುಂದೆ;
ನಿನ್ನ ಹದರ,ನಸುಗನ್ನೆ
ಅಂಗಾಲಿಗೆ ಮುತ್ತಿನ
ಮಳೆಸುರಿಸುತಾ
ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!

ನನಗೆ ಸಾಯುವುದಕ್ಕೆ ಇಷ್ಷವೇ‌‌‌
ನಿನ್ನ ಕಣ್ಣನೋಟಕ್ಕೆ
ಅರೆಕ್ಷಣ ಹೃದಯ ನಿಂತಾಗ
ನಿನ್ನ ಅಪ್ಪುಗೆಯ ಆಲಿಂಗನವ
ಬಯಸುತಾ
ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!

ಎಲ್ಲಿರುವೆ ಗೆಳತಿ ನೀನು..?

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago