ಕವಿತೆಗಳು

ಕೆ.ಟಿ.ಮಲ್ಲಿಕಾರ್ಜುನಯ್ಯ ಅವರು ಬರೆದ ಕವಿತೆ ‘ಕನಸುಗಳು’

ಕನಸುಗಳ ಮಾರುಕಟ್ಟೆಯಲಿ
ಕನಸುಗಳ ಮಾರಲು ಬಂದಿಹೆನು
ಇಲ್ಲಿ ತರಹೇವಾರಿ ಕನಸುಗಳು ಲಭ್ಯ
ಮಕ್ಕಳ ಲೋಕದಿಂದ ಕಿನ್ನರ ಲೋಕದವರೆಗೂ..

ಸಾಮಾಜಿಕ, ರಾಜಕೀಯ, ಶೈಕ್ಷಣಿಕ,
ಆರ್ಥಿಕ, ಧಾರ್ಮಿಕ….
ಯಾರಿಗೆ ಯಾವುದು ಬೇಕೋ ಆಯ್ದುಕೊಳ್ಳಿ

ಕೆಲವೊಂದು ಬಿಕರಿಯಾಗದೆ
ಹಾಗೆ ಉಳಿದಿವೆ ಧೂಳಿಡಿದು
ರಂಗು ರಂಗಿನ ಕನಸುಗಳು ಮಾತ್ರ
ಚೌಕಾಸಿ ಇಲ್ಲದೆ ಮಾರಾಟವಾಗುತಿವೆ
ಸತ್ವವಿದ್ದು, ತಳುಕು ಬಳಕು ಇಲ್ಲದವು
ಸುಮ್ಮನಿದ್ದು ಬಿಟ್ಟಿವೆ ಲೋಕದ
ರೀತಿ ರಿವಾಜು ಕಂಡು
ಗ್ರಾಹಕರು ಕಡಿಮೆ ಎಂದಲ್ಲ
ಆಯ್ದುಕೊಳ್ಳುವವರು ಕಡಿಮೆ ಎಂದು

ಸ್ವರ್ಗದ ಆಸೆಯ ಕನಸುಗಳು
ಬೇಗ ಬೇಗ ಖಾಲಿಯಾಗುತಿವೆ
ಯಾವುದೇ ರಿಯಾಯಿತಿ ಇಲ್ಲದೆ..
ಮಾಡಿದ್ದು ಕೆಟ್ಟದ್ದಾದರೂ
ನರಕದ ಕನಸುಗಳು ಬೇಡವಾಗಿವೆ
ಹಾಗಿದ್ದರೆ ಹೇಳಿಬಿಡಿ,
ನಿಮಗೆ ಯಾವುದು ಇಷ್ಟ ಅದೇ
ಮಾರುವೆ ನಿಮ್ಮಿಷ್ಟದ ದರದಲಿ….

SHANKAR G

View Comments

  • ಉತ್ತಮ ಕವನ ಮಲ್ಲಕ್

  • ಕನಸುಗಳು ಮಾರಾಟಕ್ಕಿವೆ ಎಂದೊಡನೆ, ಕನಸು ಕಾಣುವವರು ಕೊಂಬರೇ? ರಂಗಿನ ಕನಸುಗಳ ಕೊಂಡೆನೆಂದು ಕನಸು ಕಾಣುತಲಿರಿವರೆಲ್ಲಾ ಬದುಕಿಹರು...

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago