ಅವ್ವ
ಕರುಳ ಬಳ್ಳಿಯನ್ನು
ತನ್ನ ಜೀವಕ್ಕಿಂತ ಹೆಚ್ಚಿನ
ಕಕ್ಕುಲಾತಿಯನ್ನು ಕೊಟ್ಟು,
ಪೋಶಿಸಿ, ಪ್ರೀತಿಸಿ
ತನ್ನ ಉಸಿರನ ಕೊನೆಯವರೆಗೂ
ಬಿಟ್ಟು ಕೊಡದ
ಕೊರಗಿ, ಸೊರಗಿ
ಸಾಕಿ ಸಲುಹಿ, ಸಂಬಾಳಿಸುವ,
ತಲೆ ಸವರಿ ಆಶೀರ್ವದಿಸಿವ,
ಬೈದು ಬುದ್ಧಿ ಹೇಳುವ
ತಿದ್ದಿ ತೀರ್ಪು ಕೊಡುವ,
ಮೆಚ್ಚಿದರೂ ಹೆಚ್ಚಿಗೆ ಹೇಳದ,
ಬೆಚ್ಚಿದರೆ ಬಿಗಿದಪ್ಪುವ,
ಬಿದ್ದರೆ ಮೇಲೆತ್ತುವ
ಸೋತರೆ,
ಸ್ಫೂರ್ತಿ ತುಂಬುವ,
ಗೆದ್ದರೆ ದೇವರಿಗೆ ಕೈ ಮುಗಿವ ಕೈ..
ಜಗತ್ತಿನ ಏಕೈಕ ಜೀವ ಅದು ತಾಯಿ,
ಅಮ್ಮ, ಅವ್ವ, ಮಾ.
ತನ್ನನ್ನು ತನ್ನ ಸಂತಾನಕ್ಕೆ ಅರ್ಪಿಸಿ,
ಜೀವ ಹಿಂಡಿ ಅದಕ್ಕುಣಿಸುವ,
ದೇಹದ ನೀರಿಗೆಗಳನ್ನು ಮುಟ್ಟಿ
ತಾಯ್ತನದ ಕುರುಹಾಗಿ ಕಾಪಾಡುವ
ತಾರೆ ಚಂದ್ರನನ್ನು
ಸೆರಗಲ್ಲಿ ಕಟ್ಟಿ ಕಥೆಹೇಳುವ,
ಮೆದುವಾದ ಮಮ್ಮುವನ್ನು ಕಿವುಚಿ
ಹದ ಮಾಡುವ
ದೃಷ್ಟಿ ತಾಗಿತು ಎಂದು
ತಾನೇ ತನ್ನ ದೃಷ್ಟಿಯನ್ನು
ಬೇರೆಡೆ ನೆಡುವ
ನಿದ್ದೆಗೆಟ್ಟು, ಊಟ ಬಿಟ್ಟು,
ಜೀವವನ್ನು ಒತ್ತೆ ಇಟ್ಟು ಬೆಳೆಸುವ..
ಜಗತ್ತಿನ ಏಕೈಕ ಜೀವ ಅದು ತಾಯಿ,
ಅಮ್ಮ, ಅವ್ವ, ಮಾ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…