ಅಪ್ಪಾರಳ್ಳಿ ತಿಪ್ಪಣ್ಣ
ಕಸವನು ಬುಟ್ಟಿಗೆ ಹಾಕಣ್ಣ
ಕಸವನು ಎಲ್ಲೆಂದರಲ್ಲಿ ಎಸೆದರೆ
ಕಾಯಿಲೆ ಬರುವುದು ಕೇಳಣ್ಣ
ಅಪ್ಪಾರಳ್ಳಿ ತಿಪ್ಪಣ್ಣ
ಸೈಕಲ್ ನೀನು ಏರಣ್ಣ
ಪೆಟ್ರೋಲ್ ವಾಹನ ಬಳಸಿದರೆ
ವಾಯುವು ಮಲಿನ ತಿಳಿಯಣ್ಣ|
ಅಪ್ಪಾರಳ್ಳಿ ತಿಪ್ಪಣ್ಣ
ಮಳೆ ನೀರನ್ನು ಹಿಡಿಯಣ್ಣ
ನೀರು ಇರದಿದ್ದರೆ ಅಯ್ಯೊ
ಧರೆಯದು ಉರಿವುದು ನೋಡಣ್ಣ|
ಅಪ್ಪಾರಳ್ಳಿ ತಿಪ್ಪಣ್ಣ
ಶೌಚಾಲಯವ ಬಳಸಣ್ಣ
ಬಯಲಲಿ ಶೌಚ ಮಾಡಿದರೆ
ರೋಗ ಹರಡುವುದು ಕೇಳಣ್ಣ|
ಅಪ್ಪಾರಳ್ಳಿ ತಿಪ್ಪಣ್ಣ
ಶಾಲೆಗೆ ತಪ್ಪದೆ ಹೋಗಣ್ಣ
ಓದು ಬರಹ ಲೆಕ್ಕವ ಕಲಿತರೆ
ಬಾಳು ಬೆಳಗುವುದು ಕೇಳಣ್ಣ
ಅಪ್ಪಾರಳ್ಳಿ ತಿಪ್ಪಣ್ಣ
ನೈತಿಕ ಮೌಲ್ಯವ ಕಲಿಯಣ್ಣ
ಮಾನವೀಯತೆಯನ್ನು ಮರೆತರೆ
ವಿದ್ಯೆಯು ವ್ಯರ್ಥ ಕೇಳಣ್ಣ
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…