ಮಕ್ಕಳ ಸಾಹಿತ್ಯ

ಅರುಣಾ ರಾವ್ ಬೆಂಗಳೂರು ಅವರು ಬರೆದ ಮಕ್ಕಳ ಕವಿತೆ “ಅಪ್ಪಾರಳ್ಳಿ ತಿಪ್ಪಣ್ಣ”

 

ಅಪ್ಪಾರಳ್ಳಿ ತಿಪ್ಪಣ್ಣ
ಕಸವನು ಬುಟ್ಟಿಗೆ ಹಾಕಣ್ಣ
ಕಸವನು ಎಲ್ಲೆಂದರಲ್ಲಿ ಎಸೆದರೆ
ಕಾಯಿಲೆ ಬರುವುದು ಕೇಳಣ್ಣ

ಅಪ್ಪಾರಳ್ಳಿ ತಿಪ್ಪಣ್ಣ
ಸೈಕಲ್‌ ನೀನು ಏರಣ್ಣ
ಪೆಟ್ರೋಲ್‌ ವಾಹನ ಬಳಸಿದರೆ
ವಾಯುವು ಮಲಿನ ತಿಳಿಯಣ್ಣ|

ಅಪ್ಪಾರಳ್ಳಿ ತಿಪ್ಪಣ್ಣ
ಮಳೆ ನೀರನ್ನು ಹಿಡಿಯಣ್ಣ
ನೀರು ಇರದಿದ್ದರೆ ಅಯ್ಯೊ
ಧರೆಯದು ಉರಿವುದು ನೋಡಣ್ಣ|

ಅಪ್ಪಾರಳ್ಳಿ ತಿಪ್ಪಣ್ಣ
ಶೌಚಾಲಯವ ಬಳಸಣ್ಣ
ಬಯಲಲಿ ಶೌಚ ಮಾಡಿದರೆ
ರೋಗ ಹರಡುವುದು ಕೇಳಣ್ಣ|

ಅಪ್ಪಾರಳ್ಳಿ ತಿಪ್ಪಣ್ಣ
ಶಾಲೆಗೆ ತಪ್ಪದೆ ಹೋಗಣ್ಣ
ಓದು ಬರಹ ಲೆಕ್ಕವ ಕಲಿತರೆ
ಬಾಳು ಬೆಳಗುವುದು ಕೇಳಣ್ಣ

ಅಪ್ಪಾರಳ್ಳಿ ತಿಪ್ಪಣ್ಣ
ನೈತಿಕ ಮೌಲ್ಯವ ಕಲಿಯಣ್ಣ
ಮಾನವೀಯತೆಯನ್ನು ಮರೆತರೆ
ವಿದ್ಯೆಯು ವ್ಯರ್ಥ ಕೇಳಣ್ಣ

SHANKAR G

View Comments

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago