ಕೆಂಬೆಳಗಿನ ಮೂಡಣದಲಿ
ಕಂಡ ರವಿಯ ಚಿತ್ರಿಕೆ
ಕಾಲ್ಚೆಂಡಿನ ರೂಪತಾಳಿ
ಬರುವುದೇನು? ಸ್ನಾನಕೆ ||ಪ||
ಅರಬ್ಬೀ ಸಮುದ್ರ ತಟದಿ
ಉಡುಪಿ ‘ಮಲ್ಪೆಬಂದರು’
ಮೀನುಗಾರಿಕೆಗೆ ಅಲ್ಲಿದೆ –
ದೊಡ್ಡ ಮಾರುಕಟ್ಟೆಯು
ಬೋಟುಗಳು, ಕ್ಯಾನುಗಳಲಿ
ಮೀನುತುಂಬಿ ತರುವವು
ದಂಡೆಯ ಅಂಗಡಿಗಳಲ್ಲಿ
ಮೀನು ಬಿಕರಿ ಗೊಳುವವು
ನಾವಿಕ ಚೆಂಗಪ್ಪನವಗೆ
ಚಿಕ್ಕಮಗಳು ರುಕ್ಮಿಣಿ
ಮೀನಿನ ಸಾರೂಟ ಸವಿದು –
ಕೇರಿಗವಳು ಕಣ್ಮಣಿ…
ಅಪ್ಪನೊಡನೆ ನಸುಕಿನಲ್ಲಿ
‘ರುಕ್ಕು’ ತಟಕೆ ಬಂದಳು
ಮೂಡಣದಾs ಕಡಲoಚಲಿ
ಏನೊ ನೋಡಿ ನೊಂದಳು…
ಅಪ್ಪ ಸೂರ್ಯಗೇಕೆ, ಉಪ್ಪು-
ನೀರಿನಲ್ಲಿ ಸ್ನಾನವು?
ಪಾಪ, ಅವನ ಮೈಗೆ ಉರಿತ!…
ಮೈಯೆಲ್ಲೆಡೆ ತುರಿಕೆಯು…
ದೊಡ್ಡವನೇನಲ್ಲ, ಸೂರ್ಯ –
ಕಾಲ್ಚೆಂಡಿನ ಗಾತ್ರವೆ!…
ಬೋಟಿನಲ್ಲಿ ಎತ್ತಿ ತರಲು
ನಾಳೆ ನಿನಗೆ ಸಾಧ್ಯವೇ?…
ಅಂಗಳದಾs ಬ್ಯಾರೆಲ್ನಲಿ
ಸಿಹಿನೀರೇ ತುಂಬಿದೆ
ಅವನದರಲಿ ಮುಳು – ಮುಳುಗಿಸಿ
ತಿಕ್ಕಿ ತೊಳೆದು ಕಳಿಸುವೆ!…
ಕಿರು ಪರಿಚಯ
ಪ್ರಭುರಾಜ ಅರಣಕಲ್ ಅವರು, ಕಲಬುರಗಿ ಜಿಲ್ಲೆಯ, ಕಾಳಗಿ ತಾಲ್ಲೂಕಿನ ಅರಣಕಲ್ ಗ್ರಾಮದವರು. ‘ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್’ ಇಲಾಖೆಯಲ್ಲಿ ‘ಪಂಚಾ ಯತ ವಿಸ್ತರಣಾಧಿಕಾರಿಯಾಗಿ’ ನಿವೃತ್ತರು. ಪ್ರಕಟಿತ ಕೃತಿಗಳು; ‘ಮೌನ ನುಂಗುವ ಶಬ್ದಗಳು’ ಮತ್ತು ‘ಹಾಡುಮರೆತ ಕೋಗಿಲೆ’ ಕವಿತಾ ಸಂಕಲನಗಳು. ತಮ್ಮ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಪ್ರಭುರಾಜ ಅರಣಕಲ್ ಕಲಬುರ್ಗಿಯವರು, ಕವನ ತುಂಬಾ ಚೆನ್ನಾಗಿದೆ.
ಧನ್ಯವಾದಗಳು, ಶಾಂತಲಿಂಗಪ್ಪ ಪಾಟೀಲರೆ, ತಮ್ಮಪ್ರತಿಕ್ರಿಯೆಗೆ.
--ಪ್ರಭುರಾಜ ಅರಣಕಲ್
🌺🌻🙏🌻🌺