ಮಕ್ಕಳ ಸಾಹಿತ್ಯ

ಪ್ರಭುರಾಜ ಅರಣಕಲ್ ಅವರು ಬರೆದ ಮಕ್ಕಳ ಕವಿತೆ ‘ಕೆಂಬೆಳಗಿನ ಮೂಡಣದಲಿ’

ಕೆಂಬೆಳಗಿನ ಮೂಡಣದಲಿ
ಕಂಡ ರವಿಯ ಚಿತ್ರಿಕೆ
ಕಾಲ್ಚೆಂಡಿನ ರೂಪತಾಳಿ
ಬರುವುದೇನು? ಸ್ನಾನಕೆ ||ಪ||

ಅರಬ್ಬೀ ಸಮುದ್ರ ತಟದಿ
ಉಡುಪಿ ‘ಮಲ್ಪೆಬಂದರು’
ಮೀನುಗಾರಿಕೆಗೆ ಅಲ್ಲಿದೆ –
ದೊಡ್ಡ ಮಾರುಕಟ್ಟೆಯು

ಬೋಟುಗಳು, ಕ್ಯಾನುಗಳಲಿ
ಮೀನುತುಂಬಿ ತರುವವು
ದಂಡೆಯ ಅಂಗಡಿಗಳಲ್ಲಿ
ಮೀನು ಬಿಕರಿ ಗೊಳುವವು

ನಾವಿಕ ಚೆಂಗಪ್ಪನವಗೆ
ಚಿಕ್ಕಮಗಳು ರುಕ್ಮಿಣಿ
ಮೀನಿನ ಸಾರೂಟ ಸವಿದು –
ಕೇರಿಗವಳು ಕಣ್ಮಣಿ…

ಅಪ್ಪನೊಡನೆ ನಸುಕಿನಲ್ಲಿ
‘ರುಕ್ಕು’ ತಟಕೆ ಬಂದಳು
ಮೂಡಣದಾs ಕಡಲoಚಲಿ
ಏನೊ ನೋಡಿ ನೊಂದಳು…

ಅಪ್ಪ ಸೂರ್ಯಗೇಕೆ, ಉಪ್ಪು-
ನೀರಿನಲ್ಲಿ ಸ್ನಾನವು?
ಪಾಪ, ಅವನ ಮೈಗೆ ಉರಿತ!…
ಮೈಯೆಲ್ಲೆಡೆ ತುರಿಕೆಯು…

ದೊಡ್ಡವನೇನಲ್ಲ, ಸೂರ್ಯ –
ಕಾಲ್ಚೆಂಡಿನ ಗಾತ್ರವೆ!…
ಬೋಟಿನಲ್ಲಿ ಎತ್ತಿ ತರಲು
ನಾಳೆ ನಿನಗೆ ಸಾಧ್ಯವೇ?…

ಅಂಗಳದಾs ಬ್ಯಾರೆಲ್ನಲಿ
ಸಿಹಿನೀರೇ ತುಂಬಿದೆ
ಅವನದರಲಿ ಮುಳು – ಮುಳುಗಿಸಿ
ತಿಕ್ಕಿ ತೊಳೆದು ಕಳಿಸುವೆ!…

ಕಿರು ಪರಿಚಯ

ಪ್ರಭುರಾಜ ಅರಣಕಲ್ ಅವರು, ಕಲಬುರಗಿ ಜಿಲ್ಲೆಯ, ಕಾಳಗಿ ತಾಲ್ಲೂಕಿನ ಅರಣಕಲ್ ಗ್ರಾಮದವರು. ‘ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್’ ಇಲಾಖೆಯಲ್ಲಿ ‘ಪಂಚಾ ಯತ ವಿಸ್ತರಣಾಧಿಕಾರಿಯಾಗಿ’ ನಿವೃತ್ತರು. ಪ್ರಕಟಿತ ಕೃತಿಗಳು; ‘ಮೌನ ನುಂಗುವ ಶಬ್ದಗಳು’ ಮತ್ತು ‘ಹಾಡುಮರೆತ ಕೋಗಿಲೆ’ ಕವಿತಾ ಸಂಕಲನಗಳು. ತಮ್ಮ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

SHANKAR G

View Comments

  • ಪ್ರಭುರಾಜ ಅರಣಕಲ್ ಕಲಬುರ್ಗಿಯವರು, ಕವನ ತುಂಬಾ ಚೆನ್ನಾಗಿದೆ.

    • ಧನ್ಯವಾದಗಳು, ಶಾಂತಲಿಂಗಪ್ಪ ಪಾಟೀಲರೆ, ತಮ್ಮಪ್ರತಿಕ್ರಿಯೆಗೆ.
      --ಪ್ರಭುರಾಜ ಅರಣಕಲ್
      🌺🌻🙏🌻🌺

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago