ಮಕ್ಕಳ ಸಾಹಿತ್ಯ

ರೇಖಾ ಪ್ರಕಾಶ್ ಅವರು ಬರೆದ ಶಿಶು ಕವಿತೆ “ಪುಟ್ಟನ ಪ್ರಶ್ನೆ”

ಅಮ್ಮ ಅಮ್ಮ ನನ್ನಮ್ಮ
ನನ್ನ ಪ್ರಶ್ನೆಗೆ ಉತ್ತರ ಹೇಳಮ್ಮ
ಇರುಳಲಿ ಹೊಳೆಯುವ ಶಶಿ ತಾರೆಗಳು
ಹಗಲಲಿ ಕಾಣದೆ ಮರೆಯಾಗುವವು
ಸೂರ್ಯನು ಅವರ ನುಂಗುವನಂತೆ!
ಅಜ್ಜಿಯು ಹೇಳಿತು ಈ ಕಥೆಯ ನಿಜವೇನಮ್ಮ
ಅಮ್ಮ ಅಮ್ಮ ನನ್ನಮ್ಮ
ನನ್ನ ಪ್ರಶ್ನೆಗೆ ಉತ್ತರ ಹೇಳಮ್ಮ

ಕೇಳೋ ಕಂದ ನಿನ್ನ ಪ್ರಶ್ನೆಗೆ ನನ್ನ ಉತ್ತರವಿದು
ಹಗಲಲಿ ಸೂರ್ಯನ ಬೆಳಕಿನ ಹೊಳಪಿಗೆ
ಶಶಿ ತಾರೆಗಳು ಕಾಣುವುದಿಲ್ಲ
ಸೂರ್ಯನು ಅವರ ನುಂಗುವುದೂ ಇಲ್ಲ
ತಿಳಿದುಕೋ ಕಂದ, ಅಜ್ಜಿಗೆ ವಿಜ್ಞಾನ ಗೊತ್ತಿಲ್ಲ
ಪುಸ್ತಕ ಓದು, ಜ್ಞಾನವ ಬೆಳೆಸಿಕೊ
ಮೌಡ್ಯವ ನಂಬದಿರು ಎಲೆ ಕಂದ!

ತಿಳಿಯಿತು ಅಮ್ಮ
ಬೆಳಕಲಿ ಬೆಳಕಿಗೆ ಬೆಲೆ ಇಲ್ಲಾ
ಕತ್ತಲೆಯಲಿ ಕಿರು ಹಣತೆಗೂ ಬೆಲೆಯೆಂದು
ಅರಿತೆನು ನಾನಿoದು
ಅಜ್ಜಿಯು ಹೇಳಿತು ಕಟ್ಟು ಕಥೆಯನ್ನ
ನೀನು ಹೇಳಿದೆ ವಿಜ್ಞಾನವನ್ನ
ನಾ ಕಲಿತೆ ಇದರಿಂದ ಸುಜ್ಞಾನವನ್ನ
ಅಮ್ಮ ಅಮ್ಮ ನನ್ನಮ್ಮ ನೀನೆಂದರೆ ನನಗೆ ಅಚ್ಚುಮೆಚ್ಚಮ್ಮ.

SHANKAR G

View Comments

  • [6431]PHDream88 Online Casino: Login, Register & App Download Join PHDream88 Online Casino for the best betting in the Philippines. Register today, login easily, and download the app to enjoy top slots, live games, and big wins! visit: phdream88

  • Mexluckycasino8 me ha dado varias sorpresas agradables. Tienen un catálogo de juegos muy variado y siempre están agregando cosas nuevas. Buena suerte para todos en mexluckycasino8.

  • Mexbox, not bad! I like the selection of games. Could be a bit faster, but overall a solid experience. I'm planning to spend some more time on this site. Give mexbox a shot, you might find something you like.

  • ಮಂಜುನಾಥ ಗುತ್ತೇದಾರ (ಸುಂಕೇಶ್ವರಹಾಳ) ರಾಯಚೂರು says:

    ರೇಖಾ ಪ್ರಕಾಶ್ ಅವರ ಮಕ್ಕಳ ಕವಿತೆ ತುಂಬಾ ಚೆನ್ನಾಗಿ ಮೂಡಿಬಂದಿದೆ, ಇನ್ನೂ ಹೆಚ್ಚಿನ ಮಕ್ಕಳ ಕವಿತೆಗಳನ್ನು ರಚಿಸಿ ಎಂದು ಆಶಿಸುತ್ತೇನೆ.

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago