ಇಂದು ಹೊಸ ದಿನ
ತಂದ ಸೂರ್ಯನು
ಹೊಂಬೆಳಕಿನಲಿ
ರಥವೇರಿ ಬಂದ
ಹಕ್ಕಿಗಳು ಹಾಡಿದವು
ನವಿಲುಗಳು ನರ್ತಿಸಿದವು
ಕಾಡು ಕಣಿವೆಗಳಿಂದ
ತಂಗಾಳಿ ಬೀಸಿ ಬಂದವು
ಮಿಂದು ಮಡಿಯಲ್ಲಿ
ಮನೆ ಮುಂದೆ ರಂಗೋಲಿ
ಅರಳಿದವು ಹೆಂಗಳೆಯರ
ಎಳೆ ಬೆರಳುಗಳಿಂದ
ಗಂಧ ಕರ್ಪೂರದ
ಘಮಲು ಮನೆ ಮನೆಯ
ಮನ ಮನದ ಅಂಗಳಕೆ
ಸುಳಿ ಸುಳಿದು ಸುವಾಸನೆ
ಬೀರಿದವು
ಮಕ್ಕಳೆಲ್ಲರೂ ಕಿಲಕಿಲ
ಮುದ್ದು ಮಾತುಗಳನ್ನಾಡುತ್ತಾ
ಮನೆಮಂದಿಯ ಮನದೊಳಗೆ
ಮುತ್ತುಗಳ ಚೆಲ್ಲಿದರು
ಮಾವು ಬೇವುಗಳು
ನಲಿವು ನೋವುಗಳ
ತೋರಣವಾಗಿ ತಲೆ ಬಾಗಿಲಲ್ಲಿ
ಕೂಗಿ ಹೇಳಿದೆವು
ಇಂದು ಹೊಸ ದಿನ ಎಂದು!
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…