ಕವಿತೆಗಳು

ಗೀತಾ ಹೆಗಡೆ ದೊಡ್ಮನೆ ಅವರು ಬರೆದ ಕವಿತೆ ‘ತಾವು ಹುಡುಕುವ ಹಾದಿ’

ಕವನ ನನ್ನದಾಗಿತ್ತೆಂದು
ಬೀಗುವಾಗ
ತಿಳಿದಿರಲಿಲ್ಲ ಅದು-
ನನ್ನದಾಗಿತ್ತೆಂದು?

ಮುತ್ತಜ್ಜನ ಅಜ್ಜ
ಕಾಳುಣಿಸಿ ಪೊರೆದ
ಅಕ್ಷರದ ಹಕ್ಕಿ
ಓಲೆಗರಿ ಕೆದರುತ್ತ
ಹಾರಿ ಹಾರಿ
ತಾವು ಹುಡುಕುವ ಹಾದಿ!

ಗೂಡು ಕಟ್ಟಿದ ಮಮತೆ
ಮರಿಹಾಕಿ ಮರಿ ಹಾಕಿ
ಎಲ್ಲೆಂದರಲ್ಲಿ ಅಕ್ಷರಗಳ-
ಚೆಲ್ಲಾಪಿಲ್ಲಿ!

ಹಾರಿ ಬಂದ ಜೇನುಹಿಂಡು
ಕಾಲು ಸೋತು ಕೂತಿದ್ದಕ್ಕೆಲ್ಲ
ಜೇನುಗೂಡಿನೊಡೆತನ
ಲಭಿಸುವ ಹಾಗಿದ್ದಿದ್ದರೆ..

ಅಕ್ಷರದ ಮರಿ
ಬರೆದವನ ಒಳಗಿಂದ
ನೀರು ಹುಡುಕುತ ಜಾರಿ
ಪೊರೆದವನ ಮಡಿಲಿಗೆ;
ನೆಲ-ನೆಲಾಂತರದಿಂದ
ತಲ-ತಲಾಂತರದವರೆಗೆ!

ಕವನ ನನ್ನದಾಗಿತ್ತೆಂದು ಬೀಗುವಾ-
ಗ- ನಿಜಕ್ಕೂ
ತಿಳಿದಿರಲಿಲ್ಲ- ಅದು-
ನನ್ನದಾಗಿತ್ತೆಂದು?

SHANKAR G

Recent Posts

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

55 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

55 years ago

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago