ಸಂಜೆ ಬಾನಿನ ಕೆಂಪು ನೇಸರ
ನೀಲ ತಡಿಯಲಿ ಇಳಿಯುವಾಗ
ನನ್ನೆದೆಯ ಹಕ್ಕಿಗಳು ಬಿಡದೆ ಎಳೆಯುವಾಗ
ಎಳೆದರು ಬಾರದಾಗ ನೇಸರ
ಮರು ಮಾತಿಲ್ಲದೆ ಮೌನ
ಉಕ್ಕುಕ್ಕುವುದು ನೀಲ ಕಡಲ ತಡಿಯಾಗಿ
ಚಣಚಣವು ಸೇರಿ ಗಂಟೆಯಾಗಿ
ಕಾಲ ಮಾಗಿದರು ಬರಲಿಲ್ಲ ನೀನು
ಕೋಗಿಲೆಯು ಕೂಗಿಕೂಗಿ ಗೋಣುಮುರಿದು
ಬಿಡಿವಾರವಾಕಿಕೊಂಡಿತು ಶಾಂತವಾಗಿ
ಆಸೆಯಕ್ಕಿಗಳೆಲ್ಲ ಗುಟುಕುತಿಂದು
ಗೂಡಿಗೆ ಬಂದವು ಚಿಲಿಪಿಲಿಯಾಗಿ
ಚಕ್ರವಾಕ ಗಿಣಿಗೊರವಂಕ ಗುಬ್ಬಿ
ಕಾಗೆ ಗೂಬೆ ಗಿಡುಗ ಕೃಷ್ಣಪಕ್ಷಿಗಳು
ಸಾಲುಸಾಲು ಮುಗಿಲ ಮಾಲೆಹಾಕಿ
ಗಸ್ತು ಹೊಡೆದು ಪಥಸಂಚಲನ ಮಾಡಿದವು
ನಿನ್ನ ಸನಿಹವಿಲ್ಲದೊತ್ತು ಶೂನ್ಯ ನಕಶಿಕಾಂತ
ತಂಬಿಟ್ಟ ತುಟಿ ಬಿರಿದ ಕೆಂಪುಗಲ್ಲ
ಬೀಸುವ ತಂಗಾಳಿಯಲೆಗಳಲಿ ಕಂಪನಗುಡುವ ಶಾಂತ
ಕೊರಲು ಕೂಗಿನ ಗಾನಸಲ್ಲ
ಕಣ್ಣಂಚಿನ ನೀರು ಸುರಿದು
ನೈದಿಲೆಯ ಅಪ್ಪಿಹುದು
ನೀನಿಲ್ಲದೊತ್ತಲ್ಲಿ ವಿರಹದಾವಗ್ನಿ
ಸುಡುವ ನರಕಯಾತನೆ ಸುಗ್ಗಿ
ಕಡಲೊಳಗೆ ಕಲ್ಲೆಸದರೆ ಕಂಪನ ಅಲೆಗಳು
ನೀಲ ತಡಿಯಲಿ ಬಾಳೆಮೀನುಗಳು
ಎದ್ದವು ಒಲವಿನಲಿ ಜೊತೆಯಾಗಿ
ಆದರೂ, ನಾನು ತಡಿಯಲಿ ಏಕಾಂಗಿಯಾಗಿ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
(ದಿನಾಂಕ 6 ಏಪ್ರಿಲ್ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…
View Comments
ಪ್ರೇಮ ಕವಿತೆ "ವಿರಹ ವೇದನೆ "ಸೊಗಸಾಗಿದೆ.