ಕವಿತೆಗಳು

ಸವಿತಾ ನಾಯ್ಕ ಮುಂಡಳ್ಳಿ ಅವರು ಬರೆದ ಕವಿತೆ ‘ಮುನಿಯದಿರು ಬದುಕಿಗೆ’

ಯಾಕಿಷ್ಟು ನಿನಗೆ ಅವಸರ
ಜೀವದ ಅಂತ್ಯಕೆ ಆತುರ
ಯಾರ ಮೇಲೆ ಮುನಿಸು
ಒಂದಿಷ್ಟು ಕಾಲ ನೆಲೆಸು

ಕಹಿಯ ಕಾರಣ ಉಸುರದೆ
ಮೌನದಿ ಬಾಡಿ ಹೋಗುವೆ
ಸಿಹಿಯ ಜೇನನು ಅರಸದೆ
ಯಾಕೆ ಜೀವನ ಮುಗಿಸುವೆ

ದಿನದ ಹೊಸ ಸಂಚಲನದಲಿ
ಪಥದ ಕೊನೆಯ ತಿರುವಿನಲಿ
ಹಿಂತಿರುಗಿ ಒಮ್ಮೆ ನೋಡು
ಬದಲಾದರೆ ಬದಲಾಗಿ ಬಿಡು

ಸಾವಿರ ಕಂಬನಿಯ ಬಿಂದು
ಕುದಿಯುವ ಆವಿಗೆ ಬೆಂದು
ಕರಿಮೋಡ ಮಳೆ ಸುರಿದಂತೆ
ಜರಿಯದೆ ನಡೆ ನುಡಿದಂತೆ

ವಿಷದ ಕಹಿ ಅಮೃತವಾಗಿ
ಹಗ್ಗದುರುಳು ಹಾರವಾಗಿ
ಮನದ ದುಗುಡ ನೀರಾಗಿ
ಮತ್ತೆ ಧೃಢವಾಗು ಬಲವಾಗಿ

ಆಟ ಮುಗಿಸುವ ವೇಗಕೆ
ದುಡುಕುವ ಆವೇಶವೇಕೆ
ಮುನಿಯದಿರು ಬದುಕಿಗೆ
ಹಳಿಯದಿರು ಹಣೆಬರಹಕೆ

ಸವಿತಾ ನಾಯ್ಕ ಮುಂಡಳ್ಳಿ
ಶಿಕ್ಷಕಿ ಸರಕಾರಿ ಪ್ರೌಢಶಾಲೆ ಸೋನಾರಕೇರಿ
ತಾಲೂಕು:ಭಟ್ಕಳ, ಜಿಲ್ಲೆ:ಉತ್ತರ ಕನ್ನಡ

SHANKAR G

View Comments

    • ಸವಿತಾ ನಾಯ್ಕ ಮುಂಡಳ್ಳಿ ಶಿಕ್ಷಕಿ ಸರಕಾರಿ ಪ್ರೌಢಶಾಲೆ ಸೋನಾ says:

      🙏

  • ಸವಿತಾ ನಾಯ್ಕ ಮುಂಡಳ್ಳಿ ಶಿಕ್ಷಕಿ ಸರಕಾರಿ ಪ್ರೌಢಶಾಲೆ ಸೋನಾ says:

    ಕವನ ಪ್ರಕಟಿಸಿ ಪ್ರೋತ್ಸಾಹಿಸಿದ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್

    • ಸವಿತಾ ನಾಯ್ಕ ಮುಂಡಳ್ಳಿ ಶಿಕ್ಷಕಿ ಸರಕಾರಿ ಪ್ರೌಢಶಾಲೆ ಸೋನಾ says:

      Thank you soo much sir 🙏

Share
Published by
SHANKAR G

Recent Posts

ರೇವಣಸಿದ್ಧಪ್ಪ ಜಿ.ಆರ್. ಅವರಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ರೇವಣಸಿದ್ಧಪ್ಪ ಜಿ.ಆರ್. ಅವರ "ಬಾಳ ನೌಕೆಗೆ ಬೆಳಕಿನ ದೀಪ" ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನವಕವಿಗಳ ಪ್ರಥಮ ಕೃತಿ ಪ್ರಶಸ್ತಿ.…

55 years ago

ಯುವ ವಿಮರ್ಶಕ ವಿನಯ ನಂದಿಹಾಳ ಅವರಿಗೆ 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದತ್ತಿ ಪ್ರಶಸ್ತಿ

ವಿನಯ್ ನಂದಿಹಾಳ್ ಅವರ "ಕಣ್ಣಂಚಿನ ಕಿಟಕಿ" ವಿಮರ್ಶಾ ಕೃತಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ ಪ್ರಕಟವಾಗಿದೆ.…

55 years ago

ಈ ಹೊತ್ತಿಗೆ ಪ್ರಶಸ್ತಿ ಪ್ರದಾನ ಸಮಾರಂಭ: ಮಾರ್ಚ್ 09, 2025

ಸಾಹಿತ್ಯಾಸಕ್ತರೆಲ್ಲರಿಗೂ ಆತ್ಮೀಯ ಸ್ವಾಗತ. ದಿನಾಂಕ: ೦೯ ಮಾರ್ಚ್ ೨೦೨೫ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ…

55 years ago

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ "ವಿದಿಶಾ ಪ್ರಹಸನ" ಅನುವಾದದ ನಾಟಕ ಕೃತಿಗೆ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ…

55 years ago

ಅರಳಿ ನೆರಳು ಕೃತಿ ಲೋಕಾರ್ಪಣೆ

ಅಭಿಜ್ಞಾನ ಪ್ರಕಾಶನ ಹಿಪ್ಪರಗ ಬಾಗ್ ತಾಲೂಕ ಬಸವಕಲ್ಯಾಣ ಜಿಲ್ಲಾ ಬೀದರ. ಹಾಗೂ ಸಾರನಾಥ ಪ.ಜಾ. ಸರ್ಕಾರಿ ನೌಕರರ ಪತ್ತಿನ ಸಹಕಾರ…

55 years ago