ಯಾಕಿಷ್ಟು ನಿನಗೆ ಅವಸರ
ಜೀವದ ಅಂತ್ಯಕೆ ಆತುರ
ಯಾರ ಮೇಲೆ ಮುನಿಸು
ಒಂದಿಷ್ಟು ಕಾಲ ನೆಲೆಸು
ಕಹಿಯ ಕಾರಣ ಉಸುರದೆ
ಮೌನದಿ ಬಾಡಿ ಹೋಗುವೆ
ಸಿಹಿಯ ಜೇನನು ಅರಸದೆ
ಯಾಕೆ ಜೀವನ ಮುಗಿಸುವೆ
ದಿನದ ಹೊಸ ಸಂಚಲನದಲಿ
ಪಥದ ಕೊನೆಯ ತಿರುವಿನಲಿ
ಹಿಂತಿರುಗಿ ಒಮ್ಮೆ ನೋಡು
ಬದಲಾದರೆ ಬದಲಾಗಿ ಬಿಡು
ಸಾವಿರ ಕಂಬನಿಯ ಬಿಂದು
ಕುದಿಯುವ ಆವಿಗೆ ಬೆಂದು
ಕರಿಮೋಡ ಮಳೆ ಸುರಿದಂತೆ
ಜರಿಯದೆ ನಡೆ ನುಡಿದಂತೆ
ವಿಷದ ಕಹಿ ಅಮೃತವಾಗಿ
ಹಗ್ಗದುರುಳು ಹಾರವಾಗಿ
ಮನದ ದುಗುಡ ನೀರಾಗಿ
ಮತ್ತೆ ಧೃಢವಾಗು ಬಲವಾಗಿ
ಆಟ ಮುಗಿಸುವ ವೇಗಕೆ
ದುಡುಕುವ ಆವೇಶವೇಕೆ
ಮುನಿಯದಿರು ಬದುಕಿಗೆ
ಹಳಿಯದಿರು ಹಣೆಬರಹಕೆ
ಸವಿತಾ ನಾಯ್ಕ ಮುಂಡಳ್ಳಿ
ಶಿಕ್ಷಕಿ ಸರಕಾರಿ ಪ್ರೌಢಶಾಲೆ ಸೋನಾರಕೇರಿ
ತಾಲೂಕು:ಭಟ್ಕಳ, ಜಿಲ್ಲೆ:ಉತ್ತರ ಕನ್ನಡ
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
View Comments
Super
Super
🙏
ಕವನ ಪ್ರಕಟಿಸಿ ಪ್ರೋತ್ಸಾಹಿಸಿದ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್
ಸುಂದರ 👏👏
Thank you soo much sir 🙏