ಹೊರೆಯಾಗಲೊಲ್ಲೆ ಬಾಳಿನಲಿ
ಕೊನೆಯುಸಿರು ಕೈ ಬಿಡುವ ತನಕ
ಸೆರೆಯಾಗಲೊಲ್ಲೆ ಋಣಗಳಲಿ
ಎನುತಲಿದೆ ಜೀವನದ ತವಕ
ಹರಸಿರಲು ಭಗವಂತ ಒಲವ
ಹಂಚಿಹುದು ಮಡಿಲ ಮರಿಗಳಲಿ
ಮುಪ್ಪಿನಲಿ ಒಬ್ಬೊಂಟಿ ಜೀವ
ಕಿರು ಸ್ವಾಭಿಮಾನ ನರಗಳಲಿ
ಅವರಿವರ ಜೊತೆಗೊಂದು ಮಾತು
ಇಣುಕಿಸದೆ ನೋವ ನಗುವಿನಲಿ
ಶಪಿಸದೇ ಕುಡಿಗಳನು ಕುಳಿತು
ಹರಸುತಿದೆ ಸುಕ್ಕು ಮಿನುಗುತಲಿ
ಜೊತೆಗಾಗಿ ನಿಲ್ಲು ಎನಲಾರೆ
ಬದುಕು ಕಟ್ಟುತಿಹ ಮಕ್ಕಳಲಿ
ಭಾರವಾಗಿ ನಾ ಇರಲಾರೆ
ನುಡಿದ ಮುದಿಜೀವ ನಗುತಲಿ!
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…