ಕವಿತೆಗಳು

ಶ್ರೀ ಎಂ. ಎಚ್. ಲಷ್ಕರಿ ಅವರು ಬರೆದ ಕವಿತೆ ‘ಮಡದಿಯ ಮನದಾಳ’

ಕಸಿ ವಿಸಿಗೊಂಡಾ ಹೆಂಡತಿ ಗಂಡ
ಸಿಹಿ ನೋಡೆಂದೊಡೆ ಕಹಿ ಸಿಹಿಗೊಂಡಾ
ಹಸಿ ಬಿಸಿ ಉಂಡಾ ಇವ ಬಲು ಭಂಡಾ

ಬಂಡಿಯ ಮೇಲೆ ಹೆಂಡತಿ ಕಂಡಾ
ಕೆಂಡವ ಹೊತ್ತಾ ಬಸವನ ಕಂಡಾ
ಹಂಡೆಯ ಮೇಲೆ ತಾ ಕುಂತುಂಡ

ನಕ್ಕನು ಇವನು ಯಾರೋ ಮಹಿಳೆಯ ನೋಡಿ
ನಕ್ಕಳು ಹೆಂಡತಿ ಇವನಾ ನೋಡಿ
ಅತ್ತನು ಇವನು ಬೆತ್ತವ ನೋಡಿ

ಅತ್ತೆಯ ಇಳಿದಳು ಹೊತ್ತಿಗೆ ತಂದಳು
ಸುತ್ತಿಗೆ ಹಿಡಿದು ನೆತ್ತಿಗೆ ಬಿಟ್ಟಳು
ಮೆತ್ತಗೆ ನುಡಿದಳು ಕಾಲೊತ್ತೆಂದಳು

ಗೆಳಯರು ಬಂದರು ಕೊಡು ನೀರೆಂದರು
ಅವಳನು ಕಂಡರು ಬಿಡು ಬೇಡೆಂದರು
ಗರಿ ಗೆದರೆದ್ದಳು ಬರ್ರನೆ ಹೊರಟರು

ಅನುಜನು ಬಂದನು ಅಂಜುತಲೆಂದನು
ಅಟ್ಟಡವಿಗೆ ಸಿಕ್ಕ ಹೋರಿಯ ಕಂಡನು
‘ವರ’ಕರು ನಾ ವ್ಯಾಘ್ರನಡಿ ದೂಕದಿರು ಎಂದನು

ಅತ್ತಿಗೆ ಬಂದಳು ನಯವಾಗಿ ಅಂದಳು
ಹೆಣ್ಣನು ಅರಿಯದೆ ಹೊನ್ನವ ನುಂಗಿ
ಬಾಳನು ಕತ್ತಲೆ ಮಾಡದಿರು ಎಂದಳು

ಕರಗಿತು ಮನ ಮರುಗಿದ ಮಡದಿಯ ಕಂಡು
ಹರಿದು ಹೋಗುವ ಧನವನು ಸುಲಿದು
ಮದುವೆಗೆ ಬಂದ ತನ್ನ ತಂಗಿಯ ನೆನೆದು

ಎಂದನು ಮಡದಿಗೆ ಎಡವಿದನೆಂದು
ಸುಂದರ ಬಾಳನು ಕದಡಿದೇನೆಂದು
ಮನದ ಜ್ವಾಲೆ ನಂದಿಸಲೆಂದು

SHANKAR G

View Comments

  • ಇದು ಅನುಭವವಲ್ಲ, ಆದರು ಸ್ವರಸ್ಯ ಭರಿತ ನೈಜ ಸಾಲುಗಳು.......

    • ಆರಂಭದ ಸಾಲುಗಳು ಹಾಸ್ಯ ಪ್ರಧಾನವಾಗಿದ್ದು ಕೊನೆಯ ಸಾಲುಗಳು ವರದಕ್ಷಿಣೆಯ ಬಗೆಗೆ ಒತ್ತಿ ಹೇಳಿದೆ ...super sir .....

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago