ಕಸಿ ವಿಸಿಗೊಂಡಾ ಹೆಂಡತಿ ಗಂಡ
ಸಿಹಿ ನೋಡೆಂದೊಡೆ ಕಹಿ ಸಿಹಿಗೊಂಡಾ
ಹಸಿ ಬಿಸಿ ಉಂಡಾ ಇವ ಬಲು ಭಂಡಾ
ಬಂಡಿಯ ಮೇಲೆ ಹೆಂಡತಿ ಕಂಡಾ
ಕೆಂಡವ ಹೊತ್ತಾ ಬಸವನ ಕಂಡಾ
ಹಂಡೆಯ ಮೇಲೆ ತಾ ಕುಂತುಂಡ
ನಕ್ಕನು ಇವನು ಯಾರೋ ಮಹಿಳೆಯ ನೋಡಿ
ನಕ್ಕಳು ಹೆಂಡತಿ ಇವನಾ ನೋಡಿ
ಅತ್ತನು ಇವನು ಬೆತ್ತವ ನೋಡಿ
ಅತ್ತೆಯ ಇಳಿದಳು ಹೊತ್ತಿಗೆ ತಂದಳು
ಸುತ್ತಿಗೆ ಹಿಡಿದು ನೆತ್ತಿಗೆ ಬಿಟ್ಟಳು
ಮೆತ್ತಗೆ ನುಡಿದಳು ಕಾಲೊತ್ತೆಂದಳು
ಗೆಳಯರು ಬಂದರು ಕೊಡು ನೀರೆಂದರು
ಅವಳನು ಕಂಡರು ಬಿಡು ಬೇಡೆಂದರು
ಗರಿ ಗೆದರೆದ್ದಳು ಬರ್ರನೆ ಹೊರಟರು
ಅನುಜನು ಬಂದನು ಅಂಜುತಲೆಂದನು
ಅಟ್ಟಡವಿಗೆ ಸಿಕ್ಕ ಹೋರಿಯ ಕಂಡನು
‘ವರ’ಕರು ನಾ ವ್ಯಾಘ್ರನಡಿ ದೂಕದಿರು ಎಂದನು
ಅತ್ತಿಗೆ ಬಂದಳು ನಯವಾಗಿ ಅಂದಳು
ಹೆಣ್ಣನು ಅರಿಯದೆ ಹೊನ್ನವ ನುಂಗಿ
ಬಾಳನು ಕತ್ತಲೆ ಮಾಡದಿರು ಎಂದಳು
ಕರಗಿತು ಮನ ಮರುಗಿದ ಮಡದಿಯ ಕಂಡು
ಹರಿದು ಹೋಗುವ ಧನವನು ಸುಲಿದು
ಮದುವೆಗೆ ಬಂದ ತನ್ನ ತಂಗಿಯ ನೆನೆದು
ಎಂದನು ಮಡದಿಗೆ ಎಡವಿದನೆಂದು
ಸುಂದರ ಬಾಳನು ಕದಡಿದೇನೆಂದು
ಮನದ ಜ್ವಾಲೆ ನಂದಿಸಲೆಂದು
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಉತ್ತಮ ಕವಿತೆ ಸರ್..
ಇದು ಅನುಭವವಲ್ಲ, ಆದರು ಸ್ವರಸ್ಯ ಭರಿತ ನೈಜ ಸಾಲುಗಳು.......
ಉತ್ತಮವಾಗಿದೆ
ಆರಂಭದ ಸಾಲುಗಳು ಹಾಸ್ಯ ಪ್ರಧಾನವಾಗಿದ್ದು ಕೊನೆಯ ಸಾಲುಗಳು ವರದಕ್ಷಿಣೆಯ ಬಗೆಗೆ ಒತ್ತಿ ಹೇಳಿದೆ ...super sir .....