ಕವಿತೆಗಳು

ವಿಶ್ವ ಕವಿತೆಗಳ ದಿನಕ್ಕೆ ರವಿ ಪಾಟೀಲ್ ಅಥಣಿ ಅವರು ಬರೆದ ಕವಿತೆ ‘ಕವಿ ಮತ್ತು ಕವಿತೆ’

ಬರೆದುದೇ ಬರೆದುದು
ಬರೆಬರೆದು ಘನಗಾಂಭೀರ್ಯಕ್ಕಾಯ್ತು ಸುಸ್ತು
ಖಬರ್‌ದಾರ್
ನಿಂತುಕೊಳ್ಳಿ ಇನ್ನು ಸರದಿಸಾಲಿನಲ್ಲಿ ಮುಂದೆ
ಎದೆಸೆಟೆಸಿ ಹೀಗೆ ಓದಿಕೊಳ್ಳಲು
ಜ್ಞಾನಪೀಠಿಗಳನ್ನು

ಬರೆಬರೆದು ಕಿವಿ ಕಳೆದುಕೊಂಡನಲ್ಲ ಕವಿ
ಕಿವಿ
ಕವಿ

ಕವಿಗೆ ಕವಿತೆ
ಕವಿತೆಗೆ ಕವಿ ಭೆಟ್ಟಿಯಾಗಲೇ ಇಲ್ಲವಲ್ಲ
ಪ್ರಶಸ್ತಿ ಪಾರಿತೋಷಕ ಬಹುಮಾನಂಗಳು
ಇತ್ಯಾದಿ ಇತ್ಯಾದಿ

ರಾಜ್ಯ ಸಾಮ್ರಾಜ್ಯಂಗಳು ಅಚಲ ಅಂಬರಾದಿಗಳು
ಬೆಳಗು ಬೈಗು ಸೊಕ್ಕು ಸೊಡರು
ಮೋಹ ಮಾಯೆ ಮಂದಾರಗಳು
ಪಾತರಗಿತ್ತಿ ಪಕೋಡಾಗಳು
ಏನಿಲ್ಲ ಏನಿದೆ ಹೇಳಿ ಅವನ ಕವಿತೆಗಳೊಳಗೆ?

ಬರೆಬರೆದು ಸೋತನಲ್ಲ ಕವಿ
ಬರೆಬರೆದು ಗುಡ್ಡೆಹಾಕಿದನಲ್ಲ ಕವಿ
ತನ್ನ ಧಾವಂತಗಳಿಗೆ ಸೋತು
ತನಗೇ ಆತು-ಹೂತು
ದಾರ್ಷ್ಟ ದ್ರೋಹಂಗಳಾದಿ ದಾಟಿ
ಸರ್ಕಾರಗಳೆಷ್ಟೋ ಬಿದ್ದೆದ್ದವು
ಮೂಕವಿಸ್ಮಿತ ಮಾಯೆಯೊಂದು ಅಲೆಯುತ್ತದಲ್ಲ
ರಸ್ತೆಗೊಂಟ ಈತನೊಟ್ಟಿಗೆ ಹಗಲು ರಾತ್ರಿಯೆನ್ನದೇ
ಅಲೆಯುತ್ತಾನೆ ಇಂವ ಮುಪ್ಪಡರಿಕೊಂಡವನಂತೆ ಪತ್ರಿಕೆಗಳ ಕೈಲಿಡಿದು
ಪದ್ಯ ಬಂತೋ ಇಲ್ಲೋ ಎಂದು ಪತ್ರಿಕೆಗಳ ಮೂಸುತ್ತಾ
ಬರೆದಾಗಲೊಮ್ಮೊಮ್ಮೆ ಧನ್ಯೋಸ್ಮಿ
ಬರೆದಾಗಲೊಮ್ಮೊಮ್ಮೆ ಮರುಹುಟ್ಟು ಅವನಿಗೆ
ಬದುಕು ಚುಂಗಲ್ಲದೇ ಇನ್ನೇನು ಹೇಳಿ ಅವನಿಗೆ?

SHANKAR G

View Comments

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago