ಇಂದೇಕೋ..
ನನ್ನಲ್ಲಿ ನೀನು, ನಿನ್ನಲ್ಲಿ ನಾನು
ಬೆರೆತಿದ್ದರೂ ಬೇರೆಯಾಗಲು
ಜೀವ ತಲ್ಲಣಿಸಿದೆ.
ದೂರಮಾಡದೆ ನಿನ್ನ ಹಾಗೆಯೇ
ತಬ್ಬಿರಲು ಈ ಸಂಜೆಯ ಮಬ್ಬು ಬೆಂಬಿದ್ದಿದೆ
ಮುಡಿಯಲ್ಲಿರೋ ಹೂವು ನನ್ನ ಕೈಯ
ಕಾದಾಟಕೆ ಕಾದಂತಿದೆ
ಕಣ್ಣಲ್ಲಿರುವ ಆ ಮಾದಕತೆ
ತಪ್ಪೆಸಗಲು ಆಹ್ವಾನ ಕೊಟ್ಟಿದೆ
ಕಂಗೊಳಿಸುವ ತುಟಿಗಳ ತಟದಲ್ಲಿ
ದೃಷ್ಟಿ ಬೊಟ್ಟಾಗಲು ಇಷ್ಟಾಗಿದೆ
ಆ ಕೆಂಪು ಗಲ್ಲ ಈ ಗೊಲ್ಲನ ಹೃದಯದ
ಗಲ್ಲಾಪೆಟ್ಟಿಗೆಯನ್ನೇ ದೋಚಿದೆ
ಸೂತ್ರವಿಲ್ಲದೆ ತೂರಾಡುವ ಆ ಮುಂಗುರುಳು
ಈ ಎದೆಯಲ್ಲಿ ಪ್ರೇಮಗೀತೆಯ ಗೀಚಿದೆ
ನನ್ನೀ ಬಾಹುಗಳು ನಿನ್ನ ಬೇಹುಗಾರಿಕೆಗೆಂದೆ
ಇನ್ನು ಮುಡಿಪಾಗಿದೆ
ಆದರೂ ಇಂದೇಕೆ
ಈ ಮೋಹನನ ಮೋಹಿಸುವ
ಇರಾದೆ ನಿನಗೆ?
ಈ ವಿರಹವು ಆರದೆ ಮಿತಿಮೀರಿದೆ
ಹೇಳೆಯಾ…. ರಾಧೆ?
ಈ ಭಾದೆಗೆ ಕೊನೆಯಾದರೂ ಹೇಗೆ?
ರಕ್ಷಿತ್. ಬಿ. ಕರ್ಕೆರ
ಮಂಗಳೂರು
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…