ನೆರಳಾಗಿ ಬದುಕೆಂದು ಹಾರೈಸಿದಾ ದೇವ
ಬದಕು ನೆರಳಾಗಿಸುವ ಕಾಯಕವು ನನದಾಯ್ತು
ಗಿಡವಾಗಿ ಬೆಳೆದೆ ಮುಗುದ ಮಗುವಿನಂತೆ
ಮರವಾಗಿ ಬೆಳೆದೆ ಶ್ರೀರಾಮನಂತೆ
ವರವಾಗಿ ಕೊಟ್ಟೆ ಹಣ್ಣು ಹಂಪುಗಳನು
ಶಿರಬಾಗಿ ನಿಂತೆ ಮನುಕುಲಕೆ ತಂಪಾಗಿ
ಖುಷಿಯ ಹೊನಲನು ಹರಿಸಿ ಹಸಿರಾಗಿ ನಿಂದೆ
ಹೂವು ಅರಳಿಸಿ ಪರಿಮಳವ ಬೀರುತ
ಕಾಯಾಗಿ ನಿಂದೆ ಭಾರ ಹೊರುತಲಿ
ನಗುತ ಸಹಿಸಿದೆ ನೋವುಗಳ ಹಾದಿಯನು
ಕೊಯದಾಗ, ಬಡಿದಾಗ, ಮರ ಹತ್ತಿ ಕುಣಿದಾಗ
ಮೌನದಲಿ ಹೇಳಿದೆ ನಿಮ್ಮ ಖುಷಿಯೇ ನನ್ನ ಖುಷಿ
ಭೂಮಿ ಹೇಳಿತು ತೀರಾ ಸಹನೆಯು ಒಳಿತಲ್ಲ
ಭೂಮಿಗೆ ಹೇಳಿದೆ ನಾನು ನನ್ನ ಭಾರ ಹೊತ್ತು ನೀ ನಿಂದೆಯಲ್ಲ
ಅವರವರ ಕರ್ಮ ಜೀವನದ ಮರ್ಮ
ಬದುಕು ನೆರಳಾಗಬೇಕು
ನೆರಳಾಗಿ ಬದುಕಬೇಕು
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
View Comments
ತತ್ವಪೂರ್ಣವಾಗಿದೆ. ಪ್ರಬುದ್ದ ಶೈಲಿ.
ತುಂಬಾ ಚೆನ್ನಾಗಿದೆ ಕವನ. ಕೊನೆಯ ಸಾಲುಗಳು ಮಾರ್ಮಿಕ
ಆಸಕ್ತರು ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ವಾಟ್ಸಾಪ್ ಗುಂಪನ್ನು ಸೇರಬಹುದು.
https://chat.whatsapp.com/KL90U4wqSPAF01iRxqfcgm