ಕವಿತೆಗಳು

ಜಬೀವುಲ್ಲಾ ಎಂ. ಅಸದ್ ಅವರು ಬರೆದ ಕವಿತೆ ‘ನಾನೊಮ್ಮೆ ಮಹಾವೃಕ್ಷವಾಗಿದ್ದೆ’

ಅಂದು…
ಒಂದು ಸಣ್ಣ ಬೀಜವಾಗಿ
ಮಣ್ಣಿನ ಕಣಕಣಕಣಗಳ ನಡುವೆ ಅಡಗಿ
ಕಾಲಾಂತರದಿ ಧ್ಯಾನಿಸಿ
ಮುಗಿಲ ಮೇಘ ತುಡಿದು
ಹನಿಹನಿದು ಮಳೆಯಾಗಿ ಇಳೆಗೆ ಸುರಿದು
ಜೀವ ಅಂಕುರಿಸಿ, ಮೊಳಕೆಯಾಗಿ
ಭುವಿಯ ಅಂತರಾಳದಿ
ಬೇರಿನ ವೈಭವ ಮಾಗಿ
ಮಹಾವೃಕ್ಷವಾಗಿದ್ದೆ ನಾನು

ಹೂ ಮುಡಿದು, ಹಣ್ಣು ಹಡೆದು
ಜೀವರಾಶಿಗಳಿಗೆ ಆಸರೆಯಾಗಿ
ದಣಿದ ದೇಹಗಳಿಗೆ ನೆರಳಾಗಿ
ಇಳೆಗೆ ಮಳೆಯ ಕರೆವ ಕರವಾಗಿ
ನಿಮ್ಮೆಲ್ಲರ ಜೀವಕೆ ಉಸಿರ ತುಂಬುವ
ಪ್ರಕೃತಿಯಾಗಿದ್ದೆ ನಾನು

ಇಂದು…
ಎಲ್ಲರ ಸ್ವಾರ್ಥಕ್ಕೆ ಸರಕಾಗಿ
ನಿಮ್ಮ ಮನೆಗಳ ಕಿಟಕಿ, ಬಾಗಿಲು
ಕುರ್ಚಿ, ಮೇಜು, ಮಂಚಗಳಾಗಿ
ಸೌದೆ, ಉರುವಲು
ಮತ್ತೇನೇನೋ ಆಗಿ

ನಾ ಜೀವಂತವಿರುವಾಗಲೇ
ಕೊಡಲಿ ಪೆಟ್ಟು ಕೊಟ್ಟಿರಿ
ನನಗೂ ಜೀವವಿದೆಯೆಂದು ಚೀರಿದರೂ
ಕೇಳಿಸಿಕೊಳ್ಳದೆ ಹೋದಿರಿ
ಗರಗಸದಿ ಕೊರೆದು ಹಿಂಸಿಸಿದಿರಿ
ಭೂಮಿ ಆಗಸದ ನನ್ನ ನಂಟನ್ನು ಕಳಚಿ
ಯಂತ್ರಗಳ ಬಳಸಿ
ಉರುಳಿಸಿ ಬಿಟ್ಟಿರಿ

ಎಲೆಎಲೆಯನ್ನು ಬಿಡಲಿಲ್ಲ
ಬೇರನ್ನೂ ಉಳಿಸಲಿಲ್ಲ
ಅಷ್ಟು ಸಾಲದೆಂಬಂತೆ
ತುಂಡು ತುಂಡಾಗಿ ಕತ್ತರಿಸಿ
ಮೊಳೆ ಹೊಡೆದಿರಿ
ಕಸವಾಗಿಸಿ ಎಸೆದಿರಿ
ಬೆಂಕಿಗೆ ಸುಟ್ಟು ಬೂದಿಯಾಗಿಸಿದಿರಿ
ನನ್ನೊಟ್ಟಿಗೆ ಏನೆಲ್ಲಾ ಮಾಡಿದಿರಿ
ಎಷ್ಟೆಲ್ಲಾ ವಿಕೃತಿ ಮೆರೆದಿರಿ

ನಾಳೆಯೂ ನಾನು ಇರುವೆ
ಕಡಿದರು, ಸುಟ್ಟರೂ
ನೋವಾಗದ ಕೇವಲ ಕೊರಡಾಗಿ
ಬಾಗಿಸಿದಂತೆ ಬಾಗಿ
ನಿಮ್ಮ ಸ್ವಾರ್ಥಕ್ಕೆ ಶರಣಾಗಿ
ಮನುಜಕುಲದ ಬಳಕೆಯ
ಕೇವಲ ವಸ್ತುವಾಗಿ
ಇರುವೆನೆಂದರೆ ಇರುವೆನಷ್ಟೇ
ಜೀವವಿಲ್ಲದ, ಆತ್ಮವಿಲ್ಲದ
ಶವವಾಗಿ…

ನೀವು ಮರೆಯಬಹುದು
ಈಗಾಗಲೇ ಮರೆತಿರಲುಬಹುದು
ಆದರೆ ನನಗಿನ್ನೂ ನೆನಪಿದೆ
ನಾನೊಮ್ಮೆ ಮಹಾವೃಕ್ಷವಾಗಿದ್ದೆ

SHANKAR G

View Comments

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago