ಬಾನಲ್ಲಿ ರವಿಯ ರಂಗಿನಾಟ
ಬಾನಂಚಿನಲ್ಲಿ ಮೂಡಿದೆ
ಬಣ್ಣಗಳ ಸವಿನೋಟ,
ಬಾನಾಡಿಗಳ ಪಯಣ,
ಹೊರಟಿದೆ ಗೂಡಿನತ್ತ.
ನಿಶೆ ಮೂಡುತ್ತಿರುವ ಈ ಹೊತ್ತು,
ಕ್ಷಣ ಕ್ಷಣಕ್ಕೂ ಬದಲಾಗುವ,
ರಂಗಿನೋಕುಳಿಯ ಆಟದ ಗಮ್ಮತ್ತು
ನೋಡುವ ಕಣ್ಗಳಿಗೆ ಅದು
ಸೌಭಾಗ್ಯದ ಸಿಹಿ ತುತ್ತು.
ಮುಸ್ಸಂಜೆಯ ಹೊಂಬಾನು
ಸುತ್ತಲೂ ಇದೆ ಹಸಿರ ಕಾನು,
ಹಕ್ಕಿಗಳ ಕಲರವ ಕೇಳಿ,
ಸುತ್ತಿ ಬೀಸುವ ತಂಗಾಳಿ
ಹಾಡಿದೆ ಹೊಸ ಹಾಡು.
ತಂಬೆಲರು ತೂಗಿ ತೂಗಿ,
ಹೊಮ್ಮುಗಿಲು ಬೀಗಿ ಬೀಗಿ
ನಕ್ಷತ್ರಗಳೊಂದೊಂದೇ ಮೂಡಿ,
ಬಾನಲ್ಲಿ ಬರೆದ ಚಿತ್ತಾರ ಮರೆಯಾಗಿ,
ಅವರಿಸುತಿದೆ ರಾತ್ರಿ ಮನೋಹರವಾಗಿ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
View Comments
ಚೆಂದದ ಕವನ 👍
ಸುಂದರ