ಆಕಾಶದ ತಿರುಗಣೆಯಲ್ಲಿ
ಚಂದ್ರನ ಟಾರ್ಚಿನ ಕಣ್ಬೆಳಕು
ಕಾಲನ ಕಾಲಿಗೆ ಕಡೆಗೀಲಾಗಿದೆ
ಆಟೋಂಬಾಂಬಿನ ತಿದಿಮುರುಕು
ಕಾಡಿನ ಕುಸುಮದ ಎದೆಯೂ ಕಲ್ಲು
ಮಂಚದ ಮೇಗಡೆ ನೆಗ್ಗಲ ಮುಳ್ಳು
ಉಬ್ಬಿದ ಎದೆಗೆ ತೆವಲಿನ ಸುಂಕ
ಸೆರಗಿಗೆ ಕಟ್ಟಿದ ಕಾಮದ ಕೆಂಡ
ಫಕೀರಪ್ಪನ ಜೋಳಿಗೆಯೊಳಗೂ
ಅಕ್ಕಿ ಹುಳುಗಳ ಆಯುವ ಕೋಳಿ
ರೈಲಿಂಜಿನ್ನಿಗೆ ಜೋಡಿಸಿ ಬಿಟ್ಟಿವೆ
ನೆತ್ತರ ದಾಹದಿ ಹೋರುವ ಗೂಳಿ
ಉಪ್ಪುಮೂಟೆಯ ಬೆನ್ನಿಗೆ ಗಾಳ
ಎಳ್ಳಿನ ಹೊಲಕೆ ಬೆವರಿನ ಹೊದಿಕೆ
ಜಾವದ ಹುಂಜಕು ಅಲಾರಂ ಗಂಟೆ
ದುಡಿಯುವ ಹೆಗಲಿಗೆ ಬೊಂಬಿನ ಭಾರ
ಮಸಣದ ಬಯಲಲಿ ಹೊಂಗೆಯ ಚಿಗುರು
ಕತ್ತಲ ಸುಡುವ ಕೊಳ್ಳಿಯ ಬೆಳಕು
ಗುಡಿಸಲ ತುಂಬಾ ಸುರಗಿಯ ಘಮಲು
ಉಚ್ವಾಸ ನಿಶ್ವಾಸಕೂ ತೂಗುವ ಅಮಲು
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…