ಕವಿತೆಗಳು

ಎಸ್.ಪಿ. ಮಹದೇವ ಹೇರಂಬ ಅವರು ಬರೆದ ಕವಿತೆ ‘ಮನುಜ ಕುಲ’

ಕುಲವಾವುದಾದರೇನು
ಮನವ ಅರಿತರೇ ಸಾಕು
ಮಾನವೀಯತೆಯ
ನೆಲೆಯಲ್ಲಿ ನಾವಿರಬೇಕು

ಕುಲದಗೊಡವೆಯು ಬೇಡ
ಕಲ್ಮಶದ ಕಸವ ಎಸೆದು
ಕಾಯಕದ ಎದೆಯಬೆಸೆದು
ಕದವ ತೆರೆಯಲೇಬೇಕು

ಸಮಾಜದ ಸ್ವಾಸ್ಥ್ಯವ
ಕದಡುವವರ ಕೆನ್ನೆಗೆರಡು
ಬಾರಿಸಿ ಸರಿಯಾದ ದಾರಿ
ತೋರಿಸಬೇಕು

ಕಾಲನೆದುರು ಉದುರಿ
ಹೋಗುವ ಈ ಮೂರು
ದಿನದ ಬದುಕನ್ನು
ಸದಾ ಸ್ಮರಿಸುತ್ತಾ
ಸುಂದರಗೊಳಿಸಬೇಕು

ನಿಮ್ಮೊಳಗಿನ
ನೆನಪಿನ ಬುತ್ತಿ
ಆಗಾಗ್ಗೆ ಬಿಚ್ಚುತಾ
ಹಂಚುತಲಿರಬೇಕು

ಅಂತಸ್ತಿನ ಎಲ್ಲೆ ದಾಟಿ
ನಮ್ಮೊಳಗಿನ ಅಂತಸತ್ವವ ಮೀಟಿ
ಮನುಜ ನೀತಿಯ ಸಾರುತ್ತಾ
ಸಾಗುತ್ತಿರಬೇಕು

ಎಸ್.ಪಿ. ಮಹದೇವ ಹೇರಂಬ
ಗ್ರಂಥಪಾಲಕರು ಎಂ.ಇ.ಎಸ್ ಪ.ಪೂ ಕಾಲೇಜು
ಬೆಂಗಳೂರು

SHANKAR G

View Comments

  • ಹೇರಂಭ ಅವರ ಕವಿತೆಯ ಆಶಯ ಚೆನ್ನಾಗಿದೆ

Recent Posts

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

55 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

55 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

55 years ago

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago