ನೀವು ಹೊರಟು ನಿಂತಿದ್ದು;
ನಡು ಮಧ್ಯಾಹ್ನ, ಕಡು ಬಿಸಿಲಲ್ಲಿ
ಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿ
ಶತಮಾನದ ನೋವಿಗೆ ಮದ್ದು ಅರಿಯುವ ಗಳಿಗೆಯಲ್ಲಿ
ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿ
ಹಗಲು ಗಸ್ತು ತಿರುಗುವಾಗ ನೀವು ಹುಲಿ
ಯ ಗುಟುರು ಹಾಕಿದಿರಿ ಗುಟುರಷ್ಟೇ ಕೇಳಿಸಿತು;
ಕೇಳುತ್ತಿದೆ
ಹಿಮದ ಹೆಜ್ಜೆಯೂ ತೋರುತ್ತಿಲ್ಲ
ಚಿತ್ರದ ಬೆನ್ನು ಕಾಣುತ್ತಿಲ್ಲ
ಮಾಂಸದಂಗಡಿಯ ನವಿಲು ಹುಡುಕುತ್ತಿದ್ದೇನೆ
ನೀವು ಎಲ್ಲಿ? ಮಂಗಮಾಯ!
ಕೆಂಪು ದೀಪದ ಕೆಳಗೆ
ನನ್ನಕ್ಕ,ತಂಗಿಯರು ಎದೆ ಸುಟ್ಟುಕೊಂಡು
ನಲುಗುವಾಗ ನೀವು ತಾಯಿ
ಯಾಗಿ ಹೆಗಲ ಕೊಟ್ಟು, ನೋವು ಆಲಿಸಿದಿರಿ
ಹಗಲು ದೀವಟಿಗೆಯಾಗಿ ಉರಿದು,
ಉಳ್ಳವರ ಎದೆಗೊದ್ದು ಅಸಲು ಸಹಿತ ಲೆಕ್ಕ ಚುಕ್ತಾ ಕೇಳಿದಿರಿ
ನೀವು ಕಾಣದ ದಾರಿ ತುಳಿದಿರಿ
ಎದೆಯ ಚರುಮವ ಬಗೆದು
ಕಾವ್ಯ ದುಡಿಯ ಹೊಲೆದು
ಭೀಮ, ಚೋಮರ ಚರಿತೆ ಹೆಕ್ಕಿದಿರಿ
ಗಿಡಗಾಗಿ, ಹದ್ದಾಗಿ ಉಳ್ಳವರ ಸೋಗು, ಸೊಕ್ಕು ಉರಗದ ನೆತ್ತಿ ಕುಕ್ಕಿದಿರಿ
‘ಎದೆಯಾಗ ಕಾವ್ಯ ರತ್ನ’ರಾಗಿ ಜತನವಾಗಿ ಉಳಿದೀರಿ
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
(ದಿನಾಂಕ 6 ಏಪ್ರಿಲ್ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…
View Comments
ಒಳ್ಳೆ ಕವಿತೆ ಸರ್,👍👌