ಕವಿತೆಗಳು

ಕವಿತ ವಿ. ಅವರು ಬರೆದ ಕವಿತೆ ‘ವರ್ಷಧಾರೆ’

ವರ್ಷಧಾರೆ ನಿನ್ನಿಂದ ಪುಳಕಿತಗೊಂಡಿದೆ ಈ ಧರೆ
ಹರಿಯುತಿಹೆ ನೀ ಎಲ್ಲಿಗೆ ಒಂಚೂರು ನಿಲ್ಲದೆ
ಎಲ್ಲವ ಹೊತ್ತೊಯ್ಯುತಿಹೆ ಏಕೆ ಒಮ್ಮೆಗೆ
ಬಿಡುವಿಲ್ಲದೆ ಇಳೆಗೆ ಸುರಿಯುತಿಹೆ ಏಕೆ

ಪ್ರೇಮಿಗಳ ಮನ ಹಸನಾಗಿಸೊ ಪ್ರೇಮಧಾರೆ
ರೈತರ ಮನದಿ ಸಂತಸವ ತರುವ ಹರ್ಷಧಾರೆ
ವರುಣನಿಗೆ ವಸುಂಧರೆಯ ಒಲವಿನ ಕರೆ
ಸುರಿದಾಗ ಸೋನೆಮಳೆ ಇಳೆಯೆಲ್ಲಾ ಬರಿ ಪನ್ನೀರೆ

ಊರುಕೇರಿಯೆಲ್ಲಾ ಸುಳಿದಾಡಿ ನೀ ಸೇರಿಹೆ ಎಲ್ಲಿಗೆ
ಜಗದ ಚೈತನ್ಯ ನೀನೆ ನೀ ಯಾವ ಊರೆ
ಓ ನೀರೆ ಈ ಭುವಿಗೆ ನೀ ಸುರಿಯೆ ಸೌಂದರ್ಯಧಾರೆ
ಮನೆಮನಗಳ ತೊಳೆಯೋ ನನ್ನ ಕಾವೇರಿ ನೀನೆ

ತುಂತುರು ಮಳೆಹನಿಯಾಗಿ ಎಲೆಯಲ್ಲಿ ಜಾರುತಿರೆ
ಆ ಮುತ್ತಹನಿಗಾಗಿ ಮನ ಸೋಲುತಿರೆ
ಸೌಂದರ್ಯದ ಖನಿ ಶಿವನ ಜಟೆಯಿಂದ ಹರಿದ ಪಾವನೀ
ನನ್ನ ಮನವ ಗೆದ್ದ ಮಳೆಯ ರಾಣಿ ನೀ ಮುತ್ತಹನಿ ನೀ

ನೆನಪಿನ ಮಳೆಯೇ ನೀ ಇನ್ನಷ್ಟು ಸುರಿಯೇ
ಮತ್ತೊಮ್ಮೆ ನಿನ್ನಲ್ಲಿ ಮಿಂದೇಳುವ ಬಯಕೆ
ಒಂದೇ ಸಮನೆ ಸುರಿದು ಪ್ರೀತಿ ಹುಟ್ಟಿಸುವುದು ಸರಿಯೇ
ನನಗಾಗಿ ಪ್ರತಿದಿನ ಪ್ರತಿಕ್ಷಣ ನೀ ಮೆಲ್ಲನೆ ಸುರಿಯೇ
ಓ ನನ್ನ ವರ್ಷ ಧಾರೆ

SHANKAR G

View Comments

  • ......ಸೊಗಸಾಗಿದೆ....very well structured...🌺🌺🌺🌺

  • ನನ್ನ ಕವನವನ್ನು ಪ್ರಕಟಿಸಿದ ಮಿಂಚುಳ್ಳಿಸಾಹಿತ್ಯ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು

Share
Published by
SHANKAR G

Recent Posts

೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಯ ನಿಯಮಗಳಲ್ಲಿ ಬಹಳಷ್ಟು…

55 years ago

ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ “ನುಡಿಗಳ ಅಳಿವು” ವಿಮರ್ಶಾ ಸಂಕಲನಕ್ಕೆ ೨೦೨೪ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ "ನುಡಿಗಳ ಅಳಿವು"…

55 years ago

ಡಿಸೆಂಬರ್ 7, ಶನಿವಾರದಂದು ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಶೆ ಕಾರ್ಯಕ್ರಮ

ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ…

55 years ago