ಹಗುರಾಗೂ ಮನವೇ, ನೀ ಹಗುರವಾಗು,
ಅಹಂ ಭಾರ ಕಳೆದು, ಎಲ್ಲರೊಳಗೊಂದಾಗು,
ಮಣ್ಣಿಗಂಟಿದ ಹುಲ್ಲಾಗಬೇಡ ಮನವೇ,
ಮಣ್ಣ ಕಳಚಿ, ನೀ ಹಗುರಾಗು ಮನವೇ
ಹುಲ್ಲಿಗಂಟಿದ ಮುಂಜಾವಿನ ಇಬ್ಬನಿಯಾಗು,
ರವಿ ರಶ್ಮಿ ಸೋಕಿ, ಬಾನಲಿ ಆವಿಯಾಗು,
ಆವಿ ಮೋಡದಲಿ ಸೇರಿ, ಮಳೆ ಮೋಡವಾಗಿ,
ಇಳೆಗೆ ಮಳೆಯಾಗಿ, ನೀ ಹಗುರಾಗು ಮನವೇ
ಇಳೆಗೆ ಮಳೆಯಾಗಿ, ಹೊಳೆಯಾಗಿ ಸಾಗು,
ಹೊಳೆಯಾಗಿ ಸಾಗಿ, ಸಾಗರದಲಿ ಲೀನವಾಗು,
ಹಗುರವಾಗು, ನೀ ಹಗುರವಾಗು ಮನವೇ.
ಇಳೆಗೆ ನೀ ಮಳೆಯಾಗು,ಮನವೇ,
ಅನ್ನದಾತ ಬಿತ್ತಿದ ಬೀಜಕೆ,ಮೊಳಕೆಯಾಗು,
ಮೊಳೆಕೆಯಾಗಿ ಬೆಳೆದು ಬೆಳೆಯಾಗು,
ಬೆಳೆಯಾಗಿ ಹಸಿದ ಹೊಟ್ಟೆಗೆ ಅನ್ನವಾಗಿ,
ನೀ ಹಗುರವಾಗು, ಮನವೇ.
ಹಗುರಾಗೂ ಮನವೇ,ನೀ ಹಗುರವಾಗು,
ಹೊನ್ನು ಮಣ್ಣು ಹೆಣ್ಣೆಂಬ ಲೌಕಿಕ ಭಾರ ಕಳೆದು,
ಬ್ರಹ್ಮ ಚೈತನ್ಯದೊಳಗೊಂದಾಗಿ, ಹಗುರಾಗು,
ಮನವೇ ನೀ ಹಗುರವಾಗೂ.
ಸಂತರ ಏಳು ಸಾಧನಾ ಮೆಟ್ಟಿಲುಗಳನೇರಿ,
ಅನುಭಾವದ ಹಾಲ್ಜೇನ ಸವಿದು ಹಗುರಾಗಿ,
ಪರಮಾತ್ಮನ ಪರಮಾಪ್ತದ ಕೂಸಾಗಿ,
ಪರಮಾನಂದದಿ ಖಾದರಲಿಂಗನ ಚರಣದ,
ಧೂಳಾಗಿ, ಧೂಳಿನೊಳಗೊಂದಾಗೂ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…