ಸಾಲು ಮರವು ಸಾಲದಾಗಿದೆ
ನಾಕು ದಿಕ್ಕಿಗೂ
ಒಣಮರವೇ ಭಾಗವಾಗಿದೆ
ಹೆಜ್ಜೆ ಹೆಜ್ಜೆಗೂ
ಚಿಗುರ ಒಗರ ಸವಿದುಕೊಂಡು
ಲಾಲಿ ಹಾಡಿದೆ
ದೂರಮರದ ಸವಿಯನುಂಡು
ಬದುಕ ಎಣಿಸಿದೆ
ಟಿಸಿಲು ಒಡೆದು ಗೂಡಿಗೆಂದು
ಕೊಟ್ಟೆ ರಕ್ಷಣೆ
ಚಿಲಿಪಿಲಿಯ ಹಾಡಿಗೆಂದು
ಹಾಕಿದೆ ಮಣೆ
ಹಾರಲಾರೆ ದೂರವೆನಿತು
ಗರಿಯು ಹರಿದಿದೆ
ಹಾಡಲಾರೆ ರಾಗವೆನಿತು
ಕೊರಳು ಸೊರಗಿದೆ
ಮೂಡಬಲ್ಲದೇನು ಚಿಗುರು
ಮೋಡ ಜಿನುಗಿದೆ
ಟೊಂಗೆಯಲ್ಲು ಹಸಿರ ಕೆದರು
ಜೀವ ಕಾದಿದೆ.
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…