ಕಾಡುವ ಗುರಿಯ
ಸೇರಲು ಬಯಸಿದೆ,
ಕತ್ತಲ ರಾತ್ರಿಯಲಿ.
ಎತ್ತ ನೋಡಿದರು ನೀರು,
ದಾರಿ ತೋಚದು.
ಎಷ್ಟು ಹೊತ್ತು
ಕಾದು ಕೂರಲಿ,
ದಾರಿ ತೋರುವವರು
ಬರುವವರೆಂದು.
ನಾನೆ ಹಚ್ಚಿದೊಂದು ಅಣತೆ
ತೇಲಿ ಬಿಟ್ಟೆ,
ಹರಿಯುವ ನದಿಯಲಿ,
ದಾರಿ ತೋರಲು.
ದೋಣಿ ಏರಿ ಕುಳಿತೆ,
ಒಬ್ಬಂಟಿ ಪಯಣಿಗ,
ನಾ ಸಾಗಿದ್ದೆ ದಾರಿ.
ಈ ಒಬ್ಬಂಟಿ ಪಯಣಿಗನಿಗೆ,
ಜೋತೆಯಾಯಿತು
ನೀಲಿ ಆಕಾಶ.
ಇಣಕಿ ನೋಡುತ್ತಿದ್ದವು,
ಮೋಡದ ಮರೆಯಲಿ
ಅವಿತಿದ್ದ ನಕ್ಷತ್ರಗಳು.
ಅಣತೆಯ ಬೆಳಕಿಗೆ
ಆಕರ್ಷಣೆಗೊಂಡು,
ಗುಯ್ ಗುಟ್ಟುತ್ತಿದ್ದವು ಕೀಟಗಳು.
ದೋಣಿ ಸಾಗಿತು,
ಕಾಡುವ ಗುರಿ ಏನೆಂಬುದ
ಕಲ್ಪನೆ ಇಲ್ಲದೆ.
ಸ್ಪಷ್ಟತೆಯಿಲ್ಲದ
ಕತ್ತಲ ರಾತ್ರಿಯಲಿ
ಅಲೆದು, ಅಲೆದು,
ಸಾಕಯ್ತು ಎನ್ನುವಷ್ಟರಲ್ಲಿ.
ಹರಿಯುವ ನದಿಯಲಿ
ತೇಲಿ ಬಿಟ್ಟ ಹಣತೆ,
ಯಾವುದೆ ಗುರಿ ತಲುಪಿಸದೆ
ಹಾರಿ ಹೋಯ್ತು ನಡುದಾರಿಯಲಿ.
ಎತ್ತ ನೋಡಿದರು ಕತ್ತಲು,
ಪಯಣ ಮುಂದುವರಿಸಲು
ಸಹನೆ ತೋರದ ಮನ.
ಸಂಯಮದಿ ಬೀಸುತ್ತಿರುವ
ತಂಪಾದ ಗಾಳಿ,
ಜಾರಿಸಿತು ಘಾಡ ನಿದ್ರೆಗೆ.
ಎಲ್ಲಿಂದಲೂ ಆವರಿಸಿತು
ಕಣ್ಣು ಕುಕ್ಕುವ ಬೆಳಕು,
ಕಣ್ತೆರೆದು ನೋಡಿದರೆ
ನಾ ಮಲಗಿದ್ದೆ,
ನನ್ನ ಮನೆಯಲ್ಲಿ.
ಕಾಡುವ ಗುರಿ,
ಗುರಿಯಾಗೆ ಉಳಿಯಿತು.
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…