ಒಲೆ ಹಚ್ಚಿ
ಚೆಂದದ ರಂಗೋಲಿ ಹಾಕಿ,
ಬದುಕು ಹಸನುಗೊಳಿಸುತಾ
ಸಾಗಿದರೂ
ಅನುಮತಿ ಪಡೆಯಲೇ ಬೇಕು!
ಕೂರಲು ಮಾತಾಡಲು
ನೆರೆಮನೆಯ ಗೆಳತಿಯರೊಡನೆ
ಹರಟೆಯೊಡೆಯಲು
ಅನುಮತಿ ಪಡೆಯಲೇ ಬೇಕು!
ಮನೆಯೆಲ್ಲಾ ಕಾರ್ಯಗಳ ಮುಗಿಸಿ
ದಣಿದೂ ಅವನ ತಣಿಸಬೇಕು
ನೆಪಗಳ ಹೇಳುವಂತಿಲ್ಲ
ನೆಪಗಳೇನಿದ್ದರೂ ಅವನ ಸ್ವತ್ತು!
ಒಂದು ಮಾತನಾಡಿದರೆ ಹೆಚ್ಚು
ಒಂದು ಮಾತನಾಡಿದರೆ ಕಡಿಮೆ
ಮೌನವಾಗಿದ್ದರೂ ಬೈಗುಳ!
ಒಟ್ಟಿನಲ್ಲಿ ಬೈಗುಳ ತಪ್ಪಿದಲ್ಲ;
ಜೋರು ಮಾತನಾಡುತ್ತಾ
ನಗುತ್ತಿದ್ದರೆ ಗಂಡುಬೀರಿ!
ಮೌನವಾಗಿ ದುಃಖದ
ಮಡುವಿನಲ್ಲಿದ್ದರೆ ಅಳುಮುಂಜಿ!
ನಗುವುದಕ್ಕೂ ಅಳುವುದಕ್ಕೂ
ಮಾತಾನಾಡವುದಕ್ಕೂ
ಅನುಮತಿ ಪಡೆಯಲೇ ಬೇಕು!
ಹಾಕುವ ಅರಿವೆಯಿಂದ
ನಡಿಗೆ, ನೋಟದವರೆಗೆ
ಸಾವಿರಾರು ಲೆಕ್ಕಾಚಾರ!
ಕನಸು ಕಾಣಲು
ಬದುಕಿ ಬಾಳಲು
ಅಲಿಖಿತ ನಿಯಮಗಳ
ಸರಮಾಲೆ
ಅವಳಿಗೆ ಮಾತ್ರ!
ದೇಹ ಕಲ್ಲಾದರೂ
ಬದುಕಬಹುದು
ಮನವೇ ಕಲ್ಲಾದರೆ…?
ಅವಳು ಕಲ್ಲಾಗಬೇಕು,
ಅಗ್ನಿ ಪ್ರವೇಶಿಸಬೇಕು!
ಮೊದಲಿನಿಂದಲೂ ಹೀಗೆ
ನಿಯಮಗಳ ಸರಮಾಲೆ
ಅವಳಿಗೆ ಮಾತ್ರ!
ಫಲಿತಾಂಶದ ನಿರ್ಧಾರ
ಗಂಡಸಿನದ್ದು;
ಪರೀಕ್ಷೆಗಳೆಲ್ಲಾ ಅವಳಿಗೆ ಮಾತ್ರ!
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…