ಬರವಣಿಗೆಗೂ ಬೇಲಿ
ಹಾಕಿರುವಾಗ
ಬರೆದಿದ್ದೆಲ್ಲ ನಿಜವಾಗಲು
ಹೇಗೆ ಸಾಧ್ಯ?
ಕಣ್ಣಿಗೆ ಹಳದಿ ಪೊರೆ
ಕವಿದಿರುವಾಗ
ನೋಡಿದ್ದೆಲ್ಲ ಸತ್ಯವಾಗಲು
ಹೇಗೆ ಸಾಧ್ಯ?
ಮನದಲ್ಲೊಂದು
ಬಿಂಬವಿರುವಾಗ
ಸಂಬಂಧ ನೈಜವಾಗಿರಲು
ಹೇಗೆ ಸಾಧ್ಯ?
ಸ್ವತಃ ಕಳ್ಳ
ನಾಗಿರುವಾಗ
ಹಂಸ ಕ್ಷೀರ ತೀರ್ಪು ನೀಡಲು
ಹೇಗೆ ಸಾಧ್ಯ?
ಕಪ್ಪು ಬಟ್ಟೆ ಕಣ್ಣಿಗೆ
ಬಿಗಿದಿರುವಾಗ
ನ್ಯಾಯ ಧಾನ ಮಾಡಲು
ಹೇಗೆ ಸಾಧ್ಯ?
ವ್ಯವಹಾರ
ಮಾಡುವಾಗ
ದ್ರೋಹ ಚಿಂತನೆ ಮಾಡದಿರಲು
ಹೇಗೆ ಸಾಧ್ಯ?
ಗಂಟಲಲ್ಲಿ ನೀರು
ಇಳಿಯದಿರುವಾಗ
ಅನ್ನವನ್ನು ತುರುಕಲು
ಹೇಗೆ ಸಾಧ್ಯ?
ಬೇವಿನ ಮರ
ಆಗಿರುವಾಗ
ಹಣ್ಣು ಸಿಹಿಯಾಗಿರಲು
ಹೇಗೆ ಸಾಧ್ಯ?
ಮನದಲ್ಲಿ ಶಾಂತಿ
ಇಲ್ಲದಿರುವಾಗ
ಮನೆ ನಂದನವಾಗಿರಲು
ಹೇಗೆ ಸಾಧ್ಯ?
ಮಾನವತ್ವವೆ
ಇಲ್ಲದಿರುವಾಗ
ವಿಶ್ವಮಾನವನಾಗಲು
ಹೇಗೆ ಸಾಧ್ಯ?
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಆಸಕ್ತರು ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ವಾಟ್ಸಾಪ್ ಗುಂಪನ್ನು ಸೇರಬಹುದು.
https://chat.whatsapp.com/KL90U4wqSPAF01iRxqfcgm