ಸಿಕ್ಕಾಪಟ್ಟೆ ಇದ್ದವು ಮಾತುಗಳು
ಎಷ್ಟೆಂದರೆ ಸಂಖ್ಯೆಯಲ್ಲಿ ಎಣಿಸಲಾಗದಷ್ಟು
ಆಕಾಶದ ನಕ್ಷತ್ರಗಳನ್ನಾದರೂ ಎಣಿಸಬಹುದು
ಎದೆಯ ಮಾತುಗಳನ್ನಲ್ಲ
ಎದೆಯೊಳಗೆ ಅಡ್ಡಾಡಿದವು
ತುಂಬಿಕೊಂಡವು ನದಿಯಂತೆ
ಸಂಯಮದ ಅಣೆಕಟ್ಟು ಕಟ್ಟಿದ್ದೇ ತೀವ್ರ ನೋವನ್ನು
ಎದೆ ನಡುವಲ್ಲಿ ನೆಟ್ಟವು
ಉಕ್ಕಿದವು
ಹೊರಳಿದವು
ಕೂಗಿದವು ಆಕ್ರೋಶದಲ್ಲಿ
ಕನಸಿನಲ್ಲಿ ಕನವರಿಸಿದವು
ಅಣೆಕಟ್ಟಿನ ತೂಬನ್ನು
ತೆರೆದು ಬಿಡು ಎಂದು
ಏನೂ ಹೇಳುವಂತಿರಲಿಲ್ಲ ನಾನು
ಅದು ಹರಟೆ ಕಟ್ಟೆಯ ಮಾತಾಗಿರಲಿಲ್ಲ
ಹಂಚುವಂತಿರಲಿಲ್ಲ
ಅದು ತೀರ್ಥಪ್ರಸಾದ ಆಗಿರಲಿಲ್ಲ
ಒಪ್ಪಿಸಬೇಕಿತ್ತು ನಿನ್ನೆದೆಗೆ
ನಿನ್ನ ಅಪ್ಪುಗೆ ಮಾತ್ರ ಬೇಕಿತ್ತು
ಈಗಲೂ ನೀನು ಬರುವ ಸೂಚನೆಗಳಿಲ್ಲ
ಅವುಗಳ ಭೋರ್ಗರೆತವೂ ನಿಂತಿಲ್ಲ
ರೇವಣಸಿದ್ಧಪ್ಪ ಜಿ.ಆರ್. ಅವರ "ಬಾಳ ನೌಕೆಗೆ ಬೆಳಕಿನ ದೀಪ" ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನವಕವಿಗಳ ಪ್ರಥಮ ಕೃತಿ ಪ್ರಶಸ್ತಿ.…
ವಿನಯ್ ನಂದಿಹಾಳ್ ಅವರ "ಕಣ್ಣಂಚಿನ ಕಿಟಕಿ" ವಿಮರ್ಶಾ ಕೃತಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ ಪ್ರಕಟವಾಗಿದೆ.…
ಸಾಹಿತ್ಯಾಸಕ್ತರೆಲ್ಲರಿಗೂ ಆತ್ಮೀಯ ಸ್ವಾಗತ. ದಿನಾಂಕ: ೦೯ ಮಾರ್ಚ್ ೨೦೨೫ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ…
ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ "ವಿದಿಶಾ ಪ್ರಹಸನ" ಅನುವಾದದ ನಾಟಕ ಕೃತಿಗೆ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ…
1. ಕಾರ್ಯಕ್ರಮದ ಹೆಸರು: What We See, We Weave Magic: Multilingual Poetry Readings ಭಾಗವಹಿಸುತ್ತಿರುವ ಕನ್ನಡದ ಲೇಖಕ:…
ಅಭಿಜ್ಞಾನ ಪ್ರಕಾಶನ ಹಿಪ್ಪರಗ ಬಾಗ್ ತಾಲೂಕ ಬಸವಕಲ್ಯಾಣ ಜಿಲ್ಲಾ ಬೀದರ. ಹಾಗೂ ಸಾರನಾಥ ಪ.ಜಾ. ಸರ್ಕಾರಿ ನೌಕರರ ಪತ್ತಿನ ಸಹಕಾರ…