ನವಮಾಸ ನೋವುಂಡು ನಗುತಲೇ ಹೆತ್ತು
ಸಲಹಿದಳು ಭವಿಷ್ಯದ ಕನಸುಗಳನು ಹೊತ್ತು
ಚತುರ ಕಂದನಿಗೆ ಸದಾ ವಿದ್ಯೆಯೆಡೆ ಚಿತ್ತ
ಬಾಲ್ಯವ ವ್ಯಯಿಸದೆ ಸಾಗಿದ ಯಶಸ್ಸಿನತ್ತ
ಸೆಳೆಯಿತು ಸಾಗರದಾಚೆ ಮಳೆಬಿಲ್ಲ ರಂಗು
ಹೆತ್ತವಳನೇ ಮರೆಸಿತು ವಿದೇಶದ ಗುಂಗು
ಹಣದ ವ್ಯಾಮೋಹಕೆ ಪರದೇಶದೆಡೆ ಹಾರಿದ
ಆಧುನಿಕತೆ ಮೋಹದಿ ತನ್ನವರನೆಲ್ಲಾ ತೊರೆದ
ಇಳಿ ವಯಸ್ಸಿನಾಸರೆಗಾಗಿ ಹೆತ್ತ ಕಂಗಳಿಲ್ಲಿ ಕಾದಿವೆ
ಪುತ್ರನ ಮರಳಿ ಸೇರುವಾಸೆಯಲಿ ಹಂಬಲಿಸಿವೆ
ಸಂಬಂಧಗಳ ಕಡೆಗಣಿಸಿ ಕಾಣದೂರಲಿ ಜೀವನ
ತಾಯ್ನಾಡ ಮಣ್ಣ ಋಣ ಮರೆಯುತಿಹರು ಜನ
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…