ಕವಿತೆಗಳು

ದರ್ಶಿನಿ ಪ್ರಸಾದ್ ವನಗೂರು ಅವರು ಬರೆದ ಕವಿತೆ ‘ವ್ಯಾಮೋಹ’

ನವಮಾಸ ನೋವುಂಡು ನಗುತಲೇ ಹೆತ್ತು
ಸಲಹಿದಳು ಭವಿಷ್ಯದ ಕನಸುಗಳನು ಹೊತ್ತು

ಚತುರ ಕಂದನಿಗೆ ಸದಾ ವಿದ್ಯೆಯೆಡೆ ಚಿತ್ತ
ಬಾಲ್ಯವ ವ್ಯಯಿಸದೆ ಸಾಗಿದ ಯಶಸ್ಸಿನತ್ತ

ಸೆಳೆಯಿತು ಸಾಗರದಾಚೆ ಮಳೆಬಿಲ್ಲ ರಂಗು
ಹೆತ್ತವಳನೇ ಮರೆಸಿತು ವಿದೇಶದ ಗುಂಗು

ಹಣದ ವ್ಯಾಮೋಹಕೆ ಪರದೇಶದೆಡೆ ಹಾರಿದ
ಆಧುನಿಕತೆ ಮೋಹದಿ ತನ್ನವರನೆಲ್ಲಾ ತೊರೆದ

ಇಳಿ ವಯಸ್ಸಿನಾಸರೆಗಾಗಿ ಹೆತ್ತ ಕಂಗಳಿಲ್ಲಿ ಕಾದಿವೆ
ಪುತ್ರನ ಮರಳಿ ಸೇರುವಾಸೆಯಲಿ ಹಂಬಲಿಸಿವೆ

ಸಂಬಂಧಗಳ ಕಡೆಗಣಿಸಿ ಕಾಣದೂರಲಿ ಜೀವನ
ತಾಯ್ನಾಡ ಮಣ್ಣ ಋಣ ಮರೆಯುತಿಹರು ಜನ

SHANKAR G

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago