ನನಗೂ ಕೂಡ ಟಿಕೆಟ್ ಬೇಕಿದೆ ! ತಕರಾರೇನಿಲ್ಲ, ನಾನು ಏನು ಕೇಳಿಲ್ಲ.
ಹೊತ್ತು ಹೊತ್ತಿಗೆ ನೆತ್ತಿಯ ನೋಡಿ ಟೋಪಿ ಹಾಕುವೆ ಎಲ್ಲರಂತೇನಿಲ್ಲ !
ಬಡವರ ಓಟಿಗೆ ಬೆಲೆಯನು ಕಟ್ಟಿ, ಗಟ್ಟಿ ಗೂಟವ ಹೊಡೆದಿರುವೆ
ಬುಡವಿರದ ಗಿಡವ ನೆಡುವ ಕಲೆ, ಕಡೆಗೂ ನಾನು ಅರಿತಿರುವೆ
ಧರ್ಮದ ಹೆಸರಲಿ ದೇಣೀಗೆ ಎತ್ತಲು, ಬಲೆಯನು ಬೀಸಿರುವೆ
ದೇವರು ಧರ್ಮದ ದುರುಳ ಧುಳನು, ಹಗಲಿರುಳು ಹಬ್ಬಿಸುವೆ.
ಮಸಿಯ ಮುಖದಾಸೆಯ ಮೀಸೆ, ಹುರಿ ಹೊಸೆದು ತಿರುವಲು
ಊರ ಕೇರಿಲಿ ನಿಂತ ನೀರಲ್ಲಿ, ಜೋರು ಕಾರ,ಬಾರು ಮಾಡಲು
ಬೇಲಿ ಇಲ್ಲದ ಭೂಮಿ ಜಾಲಿಯಲ್ಲಿ, ಒಳಗೊಳಗೆ ಬೆಳೆಸಿರುವೆ
ಬಾಕಿ ಉಳಿದ ಖಡ್ಗಗಳೆಲ್ಲ, ಕುಣಿವ ಕೆಂಜಡೆಗೆ ಕಾಣಿಕೆ ಕೊಡುವೆ.
ನನ್ನ ನೆರಳಿನಲಿ ತಿರುಗಿ ಕೊರೆವ, ಕರಿ ಮರಗಳ ಸುಳಿವೇ ಇಲ್ಲ
ಹಳೆಯ ಹಂಗಿನಲಿ ಹಸಿದು ಕೂಗುವ, ಹೊಸ ಕುನ್ನಿ, ಕರುಗಳಿಲ್ಲ
ಹಗ್ಗ ಹೊಸೆಯುವ ಹೊಸ ಕೈಗಳಂತೂ, ನನ್ನೆದುರಲ್ಲಿ ಇಲ್ಲಿಲ್ಲ
ಹರಿದು ಬರುವ ತೊರೆಗೆ ತೊಡೆಯ ತಟ್ಟುವೆ, ಎರಡು ಮಾತಿಲ್ಲ
ಹತ್ತಿದ ಹತ್ತು ಹಲವು ಫಲ ಹರಿದು ತಿಂದಿರುವೆ, ಹಸಿದಿರುವೆ!!
ಹತ್ತೂರು ಹಳ್ಳಿಗೆ ಪಳಗಿದ, ಹಿರಿಯ ಹಳೆ ಹುಲಿಯು ನಾನಿರುವೆ
ದುಡ್ಡಿನ ದುನಿಯಾದ ದಡ್ಡು ಪಡ್ಡೆಗಳೆಲ್ಲ, ಗುಡ್ಡದಷ್ಟು ಘಳಿಸಿರುವೆ
ಮಂಡು ದಂಡಿನ ಧ್ವಜ, ಜಾತಿ ಮತದ ಬೆಂಕಿ, ಜೊತೆಗೆ ತಂದಿರುವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…