ಕವಿತೆಗಳು

ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಬಹುಕೋಶದೊಳಗೆ ನೀ ಬಂದಾಗ’

ಏಕಾಂಗಿಯ ಸರಳತೆಯಲ್ಲಿ
ಏಕಕೋಶವಾಗಿ
ಕಾಮನ ಬಿಲ್ಲ ಬಣ್ಣಗಳ
ರಂಗೇರಿಸಿ
ಬಹುಮುಖವಾಗಿ
ಛಾಪನ್ನು ಮೂಡಿಸಿದ
ನಿನ್ನ ಅವತಾರ ಮೆಚ್ಚಲೇಬೇಕು…

ಕೊಳೆಯದ ಕಸವಾಗಿ
ಹಾರಾಡಿ, ತೂರಾಡಿ
ಚೂರಾಗಿ ಜಠರದಲ್ಲಿ
ನೋವಿಗೂ ಕಾರಣವಾಗಿ
ಮಾರಣಾಂತಿಕ ರೋಗಗಳ
ತವರಾದರೂ ಬಿಡದ
ನಿನ್ನ ಅವತಾರ ಮೆಚ್ಚಲೇಬೇಕು…

ಗೃಹದೊಳಗೆಲ್ಲಾ ನಿನ್ನದೇ
ಕಾರಾಬಾರು
ದವಾಖಾನೆಯೊಳಗೂ
ನಿಲ್ಲದ ದರ್ಬಾರು
ನಗರೀಕರಣದಲೂ
ಪಾತ್ರದಳಗಿನ ಪ್ರಮುಖ
ಬೇಡೆಂದರೂ ನುಗ್ಗುವ
ನಿನ್ನ ಅವತಾರ ಮೆಚ್ಚಲೇಬೇಕು..

ಹೋರಾಟ ನಿನ್ನ ತಡೆಗಾಗಿ
ಅಲ್ಲೂ ಬಿಂಬಿಸುವೆ
ನೀರ ಹಿಡಿಕೆಯಾಗಿ
ಜೀವ ಗುಟುಕಿನ ಕುರುಹಾಗಿ
ಸುಟ್ಟರೂ ಬೂದಿಯಾಗದೆ
ಮರುಬಳಕೆಯಾಗುವ
ನಿನ್ನ ಅವತಾರ ಮೆಚ್ಚಲೇಬೇಕು..

ಆಧುನೀಕರಣದ ಸೋಗು
ಅಲಂಕಾರದಲಿ ಬೀಗಿ
ಅಳಿದಷ್ಟು ಎದ್ದು ನಿಲ್ಲುವ
ಮರೆತಷ್ಟು ಕಣ್ಣಿಗೆ ಸುಳಿವ
ಆಕರ್ಷಣೆಯ ರೂಪಕ್ಕಿಳಿವ
ನಾನಾವತಾರಿಯ ವಿಶ್ವ ಜಾತ
ನಿನ್ನ ಅವತಾರ ಮೆಚ್ಚಲೇಬೇಕು…

SHANKAR G

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago