ಏಕಾಂಗಿಯ ಸರಳತೆಯಲ್ಲಿ
ಏಕಕೋಶವಾಗಿ
ಕಾಮನ ಬಿಲ್ಲ ಬಣ್ಣಗಳ
ರಂಗೇರಿಸಿ
ಬಹುಮುಖವಾಗಿ
ಛಾಪನ್ನು ಮೂಡಿಸಿದ
ನಿನ್ನ ಅವತಾರ ಮೆಚ್ಚಲೇಬೇಕು…
ಕೊಳೆಯದ ಕಸವಾಗಿ
ಹಾರಾಡಿ, ತೂರಾಡಿ
ಚೂರಾಗಿ ಜಠರದಲ್ಲಿ
ನೋವಿಗೂ ಕಾರಣವಾಗಿ
ಮಾರಣಾಂತಿಕ ರೋಗಗಳ
ತವರಾದರೂ ಬಿಡದ
ನಿನ್ನ ಅವತಾರ ಮೆಚ್ಚಲೇಬೇಕು…
ಗೃಹದೊಳಗೆಲ್ಲಾ ನಿನ್ನದೇ
ಕಾರಾಬಾರು
ದವಾಖಾನೆಯೊಳಗೂ
ನಿಲ್ಲದ ದರ್ಬಾರು
ನಗರೀಕರಣದಲೂ
ಪಾತ್ರದಳಗಿನ ಪ್ರಮುಖ
ಬೇಡೆಂದರೂ ನುಗ್ಗುವ
ನಿನ್ನ ಅವತಾರ ಮೆಚ್ಚಲೇಬೇಕು..
ಹೋರಾಟ ನಿನ್ನ ತಡೆಗಾಗಿ
ಅಲ್ಲೂ ಬಿಂಬಿಸುವೆ
ನೀರ ಹಿಡಿಕೆಯಾಗಿ
ಜೀವ ಗುಟುಕಿನ ಕುರುಹಾಗಿ
ಸುಟ್ಟರೂ ಬೂದಿಯಾಗದೆ
ಮರುಬಳಕೆಯಾಗುವ
ನಿನ್ನ ಅವತಾರ ಮೆಚ್ಚಲೇಬೇಕು..
ಆಧುನೀಕರಣದ ಸೋಗು
ಅಲಂಕಾರದಲಿ ಬೀಗಿ
ಅಳಿದಷ್ಟು ಎದ್ದು ನಿಲ್ಲುವ
ಮರೆತಷ್ಟು ಕಣ್ಣಿಗೆ ಸುಳಿವ
ಆಕರ್ಷಣೆಯ ರೂಪಕ್ಕಿಳಿವ
ನಾನಾವತಾರಿಯ ವಿಶ್ವ ಜಾತ
ನಿನ್ನ ಅವತಾರ ಮೆಚ್ಚಲೇಬೇಕು…
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…