ಕವಿತೆಗಳು

ಚೇತನ ಭಾರ್ಗವ ಅವರು ಬರೆದ ಕವಿತೆ ‘ಜಗದ ಬೆಳಕು’

ದೇವಕಿಯ ಗರ್ಭದಿಂದ ಉದಯಿಸಿತು ಆ ಬೆಳಕು
ದುರುಳ ಕಂಸನಿಗಿನ್ನು ಶುರುವಾಯಿತು ಭಯದ ಛಳುಕು

ಅನ್ಯಾಯ, ಅಧರ್ಮ ಅಳಿಸಿ ಇಳಿಸಲು ಭೂಭಾರ
ಆಯಿತು ಧರೆಗೆ ಭಗವಾನ್ ಶ್ರೀ ಕೃಷ್ಣನ ಅವತಾರ

ಒಂದೇ ಎರಡೇ ಆತನಾಡಿದ ಬಾಲ್ಯದ ಲೀಲೆ
ಕೊರಳಲಿ ಸದಾ ಅಲಂಕರಿಸಿದೆ ಭಕ್ತರ ಹೂವಿನ ಮಾಲೆ

ಗೋಪಬಾಲರ ನೆಚ್ಚಿನ ಸಖನೀತ
ನಡೆಸಿದ ತುಂಟಾಟ ಕದ್ದೊಯ್ಯುತ ನವನೀತ

ಧರ್ಮದ ರಕ್ಷಣೆಗೆ ವಹಿಸಿದ ಮಹಾಪಾತ್ರ
ವಧಿಸಿದ ದುರುಳರ ನಡೆಸುತ ಕುರುಕ್ಷೇತ್ರ

ಸಾರಿದ ಧರ್ಮಮಾರ್ಗವ ಹೇಳುತ ಭಗವದ್ಗೀತೆ
ಜಗವನೇ ಪೊರೆಯುವ ಬೆಳಕು ಕೃಷ್ಣನ ಯಶೋಗಾಥೆ

SHANKAR G

Share
Published by
SHANKAR G

Recent Posts

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

55 years ago

ಚಿಗುರುತ್ತಿರುವ ಕಾವ್ಯದ ʼಹೊನಲುʼ – ನಾ ದಿವಾಕರ

(ದಿನಾಂಕ 6 ಏಪ್ರಿಲ್‌ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್‌ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…

55 years ago