ದೇವಕಿಯ ಗರ್ಭದಿಂದ ಉದಯಿಸಿತು ಆ ಬೆಳಕು
ದುರುಳ ಕಂಸನಿಗಿನ್ನು ಶುರುವಾಯಿತು ಭಯದ ಛಳುಕು
ಅನ್ಯಾಯ, ಅಧರ್ಮ ಅಳಿಸಿ ಇಳಿಸಲು ಭೂಭಾರ
ಆಯಿತು ಧರೆಗೆ ಭಗವಾನ್ ಶ್ರೀ ಕೃಷ್ಣನ ಅವತಾರ
ಒಂದೇ ಎರಡೇ ಆತನಾಡಿದ ಬಾಲ್ಯದ ಲೀಲೆ
ಕೊರಳಲಿ ಸದಾ ಅಲಂಕರಿಸಿದೆ ಭಕ್ತರ ಹೂವಿನ ಮಾಲೆ
ಗೋಪಬಾಲರ ನೆಚ್ಚಿನ ಸಖನೀತ
ನಡೆಸಿದ ತುಂಟಾಟ ಕದ್ದೊಯ್ಯುತ ನವನೀತ
ಧರ್ಮದ ರಕ್ಷಣೆಗೆ ವಹಿಸಿದ ಮಹಾಪಾತ್ರ
ವಧಿಸಿದ ದುರುಳರ ನಡೆಸುತ ಕುರುಕ್ಷೇತ್ರ
ಸಾರಿದ ಧರ್ಮಮಾರ್ಗವ ಹೇಳುತ ಭಗವದ್ಗೀತೆ
ಜಗವನೇ ಪೊರೆಯುವ ಬೆಳಕು ಕೃಷ್ಣನ ಯಶೋಗಾಥೆ
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…