ಕವಿತೆಗಳು

ಬಡಿಗೇರ ಮೌನೇಶ್ ಹೊಸಪೇಟೆ ಅವರು ಬರೆದ ಕವಿತೆ ‘ಮರಳಿ ಬರಲಾರ ಅಪ್ಪ’

ಹಗಲಿಡೀ ಉರಿದು
ಬೆಳಕ ಹೊತ್ತೊಯ್ದು ಮತ್ತೆ
ಮರಳುವ ಸೂರ್ಯನ ಹಾಗೆ
ಮರಳಿ ಬರಲಾರ ಅಪ್ಪ

ನನ್ನ ಎಳೆಯ ಕಣ್ಣುಗಳಾಳದಲಿ
ಚಿರ ನಿಂತು
ಹೊಂಗನಸು ತುಂಬುವ ಮೊದಲೆ
ನಕ್ಷತ್ರ ಲೋಕಕೆ ಪಯಣ ಬೆಳೆಸಿದವ

ಆತನ ತೂಗುಯ್ಯಾಲೆಯ ತೋಳುಗಳಲಿ
ಮಗುವಾಗಿ ಮಲಗಿ ನಿದ್ರಿಸಲಿಲ್ಲ
ಕಾಣಲಿಲ್ಲ ಮರಿಹಕ್ಕಿಯ ಬೆಚ್ಚನೆ ಹಿತವ
ನಡೆದೇ ಬಿಟ್ಟ ಕೈ ಬೀಸಿ ಕರೆದ
ಇರುಳ ತಾರೆಯೆಡೆಗೆ

ಏರುಜಾರಿನ ದಾರಿಯಲಿ
ಪುಟ್ಟ ಪುಟ್ಟ ಹೆಜ್ಜೆಗಳನಿಡುತ
ತುದಿ ಬೆರಳ ಹಿಡಿದು ಜೊತೆ ನಡೆವ ಮುನ್ನ
ನೆಲದ ನಂಟ ಕಳಚಿ ಹೊರಟು ಹೋದ

ಶಪಿಸುತ್ತೇನೆ ಅಪ್ಪನನು
ಮಾರ್ಗ ಮಧ್ಯದಲಿ
ಬಾಳ ಸಂತೆಯ ಮೂಟೆಯ
ಅವ್ವನ ಹೆಗಲಿಗೇರಿಸಿ
ನೇಪಥ್ಯಕೆ ಸರಿದ ನಿರ್ದಯೆಗಾಗಿ!

ಅಪ್ಪ ನನ್ನ ಪಾಲಿಗೆ ಅವ್ಯಕ್ತ ಭಾವ!
ಅಗೋಚರ ಜೀವ!
ಅಪ್ಪನೊಲುಮೆ,ಸಾಂಗತ್ಯ
ಸ್ವಪ್ನದ ಸುಖವಷ್ಟೆ!

SHANKAR G

View Comments

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago