ಹಗಲಿಡೀ ಉರಿದು
ಬೆಳಕ ಹೊತ್ತೊಯ್ದು ಮತ್ತೆ
ಮರಳುವ ಸೂರ್ಯನ ಹಾಗೆ
ಮರಳಿ ಬರಲಾರ ಅಪ್ಪ
ನನ್ನ ಎಳೆಯ ಕಣ್ಣುಗಳಾಳದಲಿ
ಚಿರ ನಿಂತು
ಹೊಂಗನಸು ತುಂಬುವ ಮೊದಲೆ
ನಕ್ಷತ್ರ ಲೋಕಕೆ ಪಯಣ ಬೆಳೆಸಿದವ
ಆತನ ತೂಗುಯ್ಯಾಲೆಯ ತೋಳುಗಳಲಿ
ಮಗುವಾಗಿ ಮಲಗಿ ನಿದ್ರಿಸಲಿಲ್ಲ
ಕಾಣಲಿಲ್ಲ ಮರಿಹಕ್ಕಿಯ ಬೆಚ್ಚನೆ ಹಿತವ
ನಡೆದೇ ಬಿಟ್ಟ ಕೈ ಬೀಸಿ ಕರೆದ
ಇರುಳ ತಾರೆಯೆಡೆಗೆ
ಏರುಜಾರಿನ ದಾರಿಯಲಿ
ಪುಟ್ಟ ಪುಟ್ಟ ಹೆಜ್ಜೆಗಳನಿಡುತ
ತುದಿ ಬೆರಳ ಹಿಡಿದು ಜೊತೆ ನಡೆವ ಮುನ್ನ
ನೆಲದ ನಂಟ ಕಳಚಿ ಹೊರಟು ಹೋದ
ಶಪಿಸುತ್ತೇನೆ ಅಪ್ಪನನು
ಮಾರ್ಗ ಮಧ್ಯದಲಿ
ಬಾಳ ಸಂತೆಯ ಮೂಟೆಯ
ಅವ್ವನ ಹೆಗಲಿಗೇರಿಸಿ
ನೇಪಥ್ಯಕೆ ಸರಿದ ನಿರ್ದಯೆಗಾಗಿ!
ಅಪ್ಪ ನನ್ನ ಪಾಲಿಗೆ ಅವ್ಯಕ್ತ ಭಾವ!
ಅಗೋಚರ ಜೀವ!
ಅಪ್ಪನೊಲುಮೆ,ಸಾಂಗತ್ಯ
ಸ್ವಪ್ನದ ಸುಖವಷ್ಟೆ!
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಸುಂದರ 👏