ಕವಿತೆಗಳು

ಮಂಜುಳಾ ಗೌಡ ಕಾರವಾರ ಅವರು ಬರೆದ ಕವಿತೆ ‘ಬಾಳಲಿ ಭರವಸೆಯಿಡು’

ಮತ್ತೆ ಮತ್ತೆ ನೀ ಅತ್ತು ಕೊರಗದಿರು
ಬಾಳಲಿ ಭರವಸೆಯಿಡು ಮನವೆ
ಬತ್ತಿದ ಕೆರೆಯಲು ನೀರು ತುಂಬುವುದು
ಎಂಬ ಸತ್ಯವ ನೀ ಅರಿ ಮನವೆ

ಬಿಸಿಲ ಬೇಗೆಯನು ಸಹಿಸುತ ಧರಣಿಯು
ಕಾಯದೆ ವರ್ಷಕೆ ಹಸಿರುಟ್ಟು ನಗಲು
ಶಿಶಿರದಿ ಎಲೆಯನು ಉದುರಿಸಿ ಮರಗಳು
ಚೈತ್ರಕೆ ಕಾಯದೆ ಮತ್ತೆ ಚಿಗುರಲು

ಇರುಳಲಿ ಭುವಿಗೆ ಕತ್ತಲು ಕವಿದರೆ
ಬೆಳಕು ಮೂಡದೆ ಹಗಲಿನಲಿ
ಬಂಜರು ಭೂಮಿಯು ಹಸನಾಗುವುದು
ಭರವಸೆಯ ಮಳೆ ಸುರಿದಾಗ

ಕಡಿದರೂ ಲತೆಯು ಮತ್ತೆ ಚಿಗುರುವುದು ಭವಿಷ್ಯದ ಫಲ ಕೊಡೊ ಹಂಬಲದಿ,
ಅಡೆತಡೆಗಳನ್ನು ದಿನವೂ ಭೇದಿಸುತ ಧರೆಯ ಸ್ಪರ್ಶಿಸದೆ ರವಿಕಿರಣ
ದಿನ್ನೆ ದಿಬ್ಬ ಕಲ್ಲು ಮುಳ್ಳಿನ ಹಾದಿಗೆ ಅಂಜಿ ನದಿ ಹರಿಯದೆ ನಿಲ್ಲುವುದೇ
ಗುರಿಯ ಸೇರುವ ತವಕದಿ ಛಲದಿ ಓಡಿ ಸೇರದೆ ಕಡಲನ್ನು

ದುಗುಡ ದುಮ್ಮಾನಗಳ ಅಡಗಿಸಿ ಕಾದು ಶಾಕುಂತಲೆ ಸೇರಿದಳು ಪ್ರಿಯತಮನನ್ನು
ಸಹನೆಯಿಂದ ನೋವೆಲ್ಲ ನುಂಗಿ ಮರಳಿ ಪಡೆದಿಲ್ಲವೇ ದುಷ್ಯಂತನನು

ಬದಲಾಗುತಲಿರುವುದು ಕಾಲಚಕ್ರವು
ನಿತ್ಯವು ದೇವರ ಲೀಲೆಯಲಿ
ದುಃಖವು ಕಳೆದು ಸುಖವು ಮರಳುವುದು
ಶಾಶ್ವತ ಏನಿದೆ ಧರೆಯಲ್ಲಿ

ಹಿಂದಿನ ಕಹಿಯನು ನೆನೆಯುತ ಚಿಂತಿಸಿ
ಇಂದಿನ ಭವಿಷ್ಯವ ಮರೆಯದಿರು
ನಿನ್ನೆ ನಾಳೆಗಳ ಯೋಚನೆ ತೊಲಗಿಸು
ಬಂದೇ ಬರುವುದು ಶುಭದಿನವು

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago