ಕವಿತೆಗಳು

ಪ್ರಕಾಶ ರಾಜಗೋಳಿ ಅವರು ಬರೆದ ಕವಿತೆ ‘ಅಂದಿನಿಂದ ಇಂದಿನವರೆಗೆ’

ನೋಡಿದ್ದೀರಿ ನೀವು, ಬ್ರಿಟಿಷರ ದುರಾಡಳಿತ,ಕಿಂಗ್ ಜಾರ್ಜರ ರಾಜಪ್ರಭುತ್ವ
ನೋಡಿದಿರಲ್ಲ ನೆಹರುನಿಂದ ಮೋದಿವರೆಗೆ ಸ್ವರಾಜ್ಯ, ಪ್ರಜಾಪ್ರಭುತ್ವ

ಅಂದು ಹೇಳದಿದ್ರೆ “ಕಿಂಗ್ ಇಸ್ ಗಾಡ್” ಬೀಳುತಿದ್ವು ಏಟು
ಇಂದು ನಮಗೆ ಸ್ವಾತಂತ್ರ್ಯ ಸಿಕ್ಕಿದ್ರೂ ಲೆಕ್ಕಕ್ಕಿಲ್ಲ ನಮ್ಮ ಓಟು

ಕಳೆದಿರಿ ಬಾಲ್ಯ – ಮಣ್ಣಿನ ಗೋಡೆ, ಕಪ್ಪು ಹೆಂಚಿನ ಮನೆ
ಹಾಲಿ ವಸತಿ – ಬೆಂದಕಾಳೂರಿನ ಮಗನ ಕಾಂಕ್ರೀಟು ಮನೆ

ಅಂದು ದುರ್ಲಭವಾಗಿತ್ತು ಊರಿಗೆ ಹೋಗಲು ಖಾಸಗಿ ಸಾರಿಗೆ
ಇಂದು ದೈವಾನುಗ್ರಹದಿಂದ ಬಳಸಿದಿರಲ್ಲ ವಿಮಾನ ಸಾರಿಗೆ

ನೀವು ಚಿಕ್ಕವರಿದ್ದಾಗ ಬಳಸುತ್ತಿದ್ದರು ಬೆಳ್ಳಿಯ ರೂಪಾಯಿ
ಈಗ ವಿದೇಶಗಳಲ್ಲೂ ಬಳಸಬಹುದು ಭಾರತದ ರೂಪಾಯಿ.

ಆಗಿನ ಕಾಲದಲ್ಲಿ ವಿರಳವಾಗಿ ಬಳಸುತ್ತಿದ್ದರು ದೂರವಾಣಿ
ಈಗಿನ ಕಾಲದಲ್ಲಿ ಮನೆಮಂದಿ ಕೈಲೆಲ್ಲಾ ಜಂಗಮವಾಣಿ

ನೀವಾಗ ಫ್ರೀಯಾಗಿ ಈಜುತ್ತಿದ್ದಿರಿ ನದಿ, ಹಳ್ಳ, ಕೊಳ
ಇವಾಗ ಕೊಡಬೇಕು ಫೀಜು ಬಳಸಬೇಕೆಂದ್ರೆ ಈಜುಕೊಳ

ಕುಡಿಯೋ ನೀರು ಬೇಕಾದ್ರೆ ಬಾವಿ, ಕೆರೆ, ಹೊಳೆ ಇದ್ದವು
ಈಗ ನೋಡಿ ಮಾರಲಿಕ್ಕೆ ಪ್ಲಾಸ್ಟಿಕ್ ಬಾಟಲ್ ನೀರು ಬಂದವು

ಅಂದಿನ ಲಗ್ಜರಿ, ಇದ್ದರೆ ಮನೆಯಲ್ಲಿ ಜಳಕದ ಸಾಬೂನು
ಇಂದಿನ ಅವಶ್ಯಕತೆ ತಲೆಗೊಂದು ತರಹೇವಾರಿ ಸಾಬೂನು

ಅಂದು ದೇವರ ಪೂಜೆಗೆ ಹೂಗಾರರು ಕೊಡತಿದ್ರು ಪತ್ರಿ, ಹೂವು
ಇಂದು ಮಾರ್ಕೆಟಿಂದ ಕೊಂಡು ತಂದು ಫ್ರಿಜ್ಜಲ್ಲಿಡಬೇಕು ನಾವು

ಅವತ್ತು, ರಾತ್ರಿಯಾದರೆ ಮನೆಗೊಂದು ಲಾಟೀನು,ಚಿಮಣಿ ಎಣ್ಣೆ ದೀಪ
ಇವತ್ತು, ಹಗಲೊತ್ತೆ ಉರೀತಾವೆ ರೂಮಿಗೊಂದು ಬಲ್ಬು ಎಲ್ ಇ ಡಿ ದೀಪ

ಬೆಳೆದಿರಲ್ಲ, ಉಂಡು ಮನೆಯ ಹಾಲು ಹೈನು, ಜವಾರಿ ಊಟ
ಏನಿದು ಬದುಕು? ಕೊಂಡ ಹಾಲು, ತಿನ್ನಲು ಪಿಜ್ಜಾ ಪರೋಟ

ಬರೆಯುತ್ತ ಬೆಳೆದಿರಿ ಪೋಸ್ಟ್ ಕಾರ್ಡು, ಅಂತರ್ದೇಸಿ, ಪುಟಗಟ್ಟಲೆ ಪತ್ರ.
ಪತ್ರದ ಬದಲು ಮೆಸೇಜು, ಹೆಚ್ಚುತ್ತಿವೆ ಇಮೋಜಿಗಳ ಪಾತ್ರ, ಗಾತ್ರ

ಆಗ ನಯಾ ಪೈಸೆ, ನಾಕಾಣೆ, ರೂಪಾಯಿ, ಇಲ್ಲವೇ ವಸ್ತು ವಿನಿಮಯದ್ದೆ ಆಟ
ಈಗ ನೂರರ ನೋಟು, ಪ್ಲಾಸ್ಟಿಕ್ ಕಾರ್ಡು, ಡಿಜಿಟಲ್ ಕರೆನ್ಸಿಗಳದ್ದೇ ಆಟ

ಆಗೆಲ್ಲ ಖರೆ ಮತ್ತು ನೆಟ್ಟಗೆ ಮಾತು, ಮಾತಿಗಿತ್ತು ಕಿಮ್ಮತ್ತು, ವಜನು
ಈಗೆಲ್ಲ ಮಾತು ಹಗುರ, ಬದಲಿಗೆ ಏರುತ್ತಿದೆ ದೇಹದ ವಜನು
ಆರೋಗ್ಯದಿಂದಿದ್ದು ಸದಾ ಹರಸುತ್ತಿರಿ ನಮ್ಮನ್ನು
ನಿಮ್ಮ ಆಶೀರ್ವಾದವಲ್ಲದೆ ನಮಗೇನು ಬೇಕಿನ್ನು?

SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago