ಕವಿತೆಗಳು

ದ್ವಾರನಕುಂಟೆ ಪಿ.ಚಿತ್ತಣ್ಣ ಅವರು ಬರೆದ ಕಥನ ಕವಿತೆ ‘ನವಿಲು ಕುಣಿದಾಗ’

ಅಯ್ಯೋ! ಭುವಿಯೇ ಬಿರಿಯುವ ಬರವು
ಬಂದಿತು ಒಂದು ಕಾಲದಲಿ
ಜನಗಳ ಮೊಗದಲಿ ನಗುವೆ ಇಲ್ಲ
ಹರಡಿತು ಹಸಿವಿನ ಬಿರುಗಾಳಿ

ಎಲೆಗಳು ಒಣಗಿ ಮರಗಳು ಸೊರಗಿ
ಮನಗಳ ಒಳಗೆ ಮರುಕದನಿ
ಕಣ್ಣಿಯ ಕಳಚಿ ಬಿಟ್ಟರು ದನಕರು
ಊರಿನ ಹೋರಗೆ ಜೀವ ದನಿ

ಕುಡಿಕೆಯ ಹೊನ್ನು ಕರಗುತಲಿತ್ತು
ಮಣ್ಣಿನ ಮಡಿಕೆಯು ಒಣಗುತ್ತ
ವಾಡೆಯ ಧಾನ್ಯವು ಮುಗಿಯುತ್ತಲಿತ್ತು
ಕೆಲವರ ಮನೆಗಳು ಹಸಿರಾಗಿ

ಹಟ್ಟಿಯ ಸಾಮಿಗೆ ಹೂವುಗಳಿಲ್ಲದೆ
ಹೊತ್ತಿನ ಪೂಜೆಯು ನಿಂತಿತ್ತು
ಹೊತ್ತಿಗೆ ಹೊತ್ತು ಕಳೆಯುವ ಕತ್ತಿನ
ಮೇಲೆಯೇ ಮೋಡವು ತೂಗಿತ್ತು

ದಿನದಿನ ಹೀಗೆಯೇ ಆದರೆ ಹೇಗೋ?
ಊರಿನ ಕಟ್ಟೆಯ ಮಾತುಕತೆ
ಮಳೆಯೇ ಬಗ್ಗದು ಭೂಮಿಯ ಕಡೆಗೆ
ಜೀವಗಳಿಗಿನ್ನು ಅಧೋಗತಿ

ಬಣಬಯಲಿನ ಒಳಗೆ ಕುಣಿಯುವ
ಹಿಂಡಿನ ನವಿಲನು ಕಂಡನು ರಂಗಜ್ಜ
ಇಂದೇ ಸಂಜೆ ಮಳೆರಾಯನು ಬರುವನು
ನೋಡಿರೋ ದೂತರ ನರ್ತನವೆಂದ

ಬಿಟ್ಟ ಕಣ್ಣುಗಳ ಬಿಟ್ಟಂತೆಯೇ
ಕಣ್ಮನ ತುಂಬಿತು, ಅಜ್ಜನ ಮಾತನು
ಊರಜನ ಅಲ್ಲಗಳೆಯುವ
ಹೊತ್ತಿಗೆ ಬಿತ್ತು ಜೋರು ಮಳೆ

ಮರಗಳ ನೆಟ್ಟರು ವನಗಳಬಿಟ್ಟರು
ಗೋಮಾಳವು ಇತ್ತು ಊರಿನಲಿ
ಬರವು ಬರದೇ ಸಾಕುತಲಿದ್ದವು
ಸಂತೃಪ್ತಿಯ ಕೆರೆಕಟ್ಟೆಗಳ ತುಂಬುತಲಿ

ಜನಗಳ ಹೆಜ್ಜೆ ನದಿಕೆರೆಗಳ ಮುಚ್ಚಿ
ಜೀವಿಸುವವರೆದುರು ಮರ ಕಾಣೆ!
ದುಡ್ಡಿನ ಬಡಾಯಿ ಬಾಳುವವರಲಿ
ನವಿಲು ನರ್ತನದ ಮನಕಾಣೆ.

ಅರ್ಥ

ಕಣ್ಣಿ: ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಲು ಬಳಸುವ ಹಗ್ಗ.

SHANKAR G

Share
Published by
SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago